ಹೊಸದಿಗಂತ ವರದಿ ಹುಬ್ಬಳ್ಳಿ:
ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಗುರುವಾರ ಇಲ್ಲಿಯ ಭುವನೇಶ್ವರಿ ನಗರದ ದಲಿತರ ಕಾಲೋನಿಯಲ್ಲಿ ಪಾದಯಾತ್ರೆ ನಡೆಸಿದರು.
ಶ್ರೀಗಳು ಬೀದಿಗಳಲ್ಲಿ ನಡೆದು ಬರುತ್ತಿದಂತೆ ಭಕ್ತರು ಹಾಗೂ ನೆರೆದಂತಹ ಜನರು ಹೂವು ಹಾಕಿ ಭಕ್ತಿ ಸಮರ್ಪಿಸಿದರು. ಜೈಶ್ರೀರಾಮ್ ಘೋಷಣೆ ಕೂಗಿದರು. ಕಾಲೋನಿಯ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿದರು.
ವಿಶ್ವ ಸುಖಮಯವಾಗಿದೆ ಎಂದರೆ ಅದಕ್ಕೆ ಶ್ರೀರಾಮ ಕಾರಣ, ರಾವಣ ಕೆಟ್ಟ ಗುಣದ ಸಂಕೇತ. ಸುಖ, ಸಂತೋಷಕ್ಕೆ ರಾಮನ ಆರಾಧನೆ ಮಾಡೋಣ ಎಂದು ಪೇಜಾವರ ಶ್ರೀಗಳು ದೇವಸ್ಥಾನದಲ್ಲಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.