ಕಾಂಗ್ರೆಸ್ ಅಡ್ರೆಸ್ ಹುಡುಕಲು ಪಾದಯಾತ್ರೆ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಬಳ್ಳಾರಿ: 

ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದ್ದು, ರಾಜ್ಯದಲ್ಲಿ ಅಲ್ಪಸ್ವಲ್ಪ ಜೀವ ಹಿಡಿದಿದೆ, ಮುಂಬರುವ ದಿನಗಳಲ್ಲಿ ಅದೂ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ಸಿರುಗುಪ್ಪ ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ಸೇ ಇಲ್ಲದಂತಾಗಿದೆ, ಕರ್ನಾಟಕದಲ್ಲಿ ಅಡ್ರೆಸ್ ಹುಡುಕಲು ಪಾದಯಾತ್ರೆ ಮಾಡುತ್ತಿದ್ದಾರೆ, ಇದಕ್ಕೆ ಕವಡೆ ಕಾಸಿನ ಕಿಮ್ಮಿತ್ತಿಲ್ಲದಾಗಿದೆ, ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಹಣ ಮಾಡಿದ್ದಾರೆ ಎಂದು ನಾವಲ್ಲ ರಮೇಶ್ ಕುಮಾರ್ ಅವರೇ ಹೇಳಿದ್ದಾರೆ, ಇದಕ್ಕೆ ಸೊನಿಯಾ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಯಾರೂ ವಿರೋಧಿಸಿಲ್ಲ ತೆಪ್ಪಗೆ ಸುಮ್ಮನಾಗಿದ್ದಾರೆ, ಇದರ ಅರ್ಥ ಏನು, ದೇಶದಲ್ಲಿ ಎಷ್ಟು ಹಣ ಲೂಟಿ ಹೊಡೆದಿರಬಹುದು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಕಾಂಗ್ರೆಸ್ ನವರಿಗೆ ಅಂಬೇಡ್ಕರ್ ಅವರ ಹೆಸರು ಹೇಳಲು ಯೋಗ್ಯತೆ ಇಲ್ಲ, ಅಂಬೇಡ್ಕರ್ ಅವರನ್ನು ಪ್ರಧಾನ ಮಂತ್ರಿ ಯನ್ನಾಗಿ ಮಾಡೋದು ತಪ್ಪಿಸಿದ್ದೇ ಕಾಂಗ್ರೆಸ್ ನವರು ಅಂತಹ‌ ಕೆಟ್ಟ ಸಂಸ್ಕೃತಿ ಕಾಂಗ್ರೆಸ್ ನವರದ್ದು, ಮೊದಿಜೀ ಅವರು, ಇಡೀ ಜಗತ್ತು ಕಂಡ ಅಪ್ರತಿಮ ಮಹಾನ್ ನಾಯಕ, ಅವರ ಹೆಸರು ಹೇಳೋಕು ಕಾಂಗ್ರೆಸ್ ‌ನವರಿಗೆ ಯೋಗ್ಯತೆ ಇಲ್ಲ, ಕಳೆದ 8 ವರ್ಷಗಳ ಕಾಲ, ವಿಶ್ರಾಂತಿ ಪಡೆಯದೇ ದೇಶದ ಅಬಿವೃದ್ಧಿಗಾಗಿ ಮಾದರಿ ಕೆಲಸಗಳನ್ನು ಮಾಡುತ್ತಿದ್ದಾರೆ, ದೇಶದ ಅಭಿವೃದ್ಧಿ ಕಂಡು ನಾನಾ ರಾಷ್ಟ್ರಗಳು ಮೆಚ್ಚುಗೆ‌ ವ್ಯಕ್ತಪಡಿಸಿವೆ, ಎಂದರು.
ಮೊದಿಜೀ ಹಾಗೂ ಬೊಮ್ಮಾಯಿ‌ ಅವರು ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿ, ಅಭ್ಯರ್ಥಿ ಯಾರು ಎಂಬುದನ್ನು ಪಕ್ಷ ಘೋಷಣೆ ಮಾಡಲಿದೆ, ಇದರ ಬಗ್ಗೆ ಗೊಂದಲ ಮಾಡಿಕೊಳ್ಳದೇ ನಮ್ಮ ಅಭ್ಯರ್ಥಿ ಯನ್ನು ಗೆಲ್ಲಿಸುವ ಕೆಲಸ ಮಾಡಿ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಬಿ.ಶ್ರೀರಾಮಲು, ಶಶಿಕಲಾ ಜೊಲ್ಲೆ, ಸಿರುಗುಪ್ಪ ಶಾಸಕ ಎಮ.ಎಸ್.ಸೋಮಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದ ಗೋನಾಳ್ ಮುರಹರಗೌಡ, ಮಂಡಲ ಅಧ್ಯಕ್ಷ ಆರ್.ಸಿ.ಪಂಪನಗೌಡ, ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!