ವ್ಹೀಲ್‌ಚೇರ್‌ನಲ್ಲಿ ಬಂದು ಹಕ್ಕು ಚಲಾಯಿಸಿದ ಪದ್ಮಶ್ರೀ ಪುರಸ್ಕ್ರತೆ ಸುಕ್ರಿ ಬೊಮ್ಮಗೌಡ

ಹೊಸದಿಗಂತ ವರದಿ ಅಂಕೋಲಾ :

ಇಲ್ಲಿಯ ಬಡಗೇರಿಯ ಬೂತ್ ನಂ.182 ನಲ್ಲಿ ಪದ್ಮಶ್ರಿ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಮಧ್ಯಾಹ್ನ 1.10 ಕ್ಕೆ ಮತದಾನ ಮಾಡಿದರು. ಮಧ್ಯಾಹ್ನ ವೀಲ್ ಚೇರ್ ನಲ್ಲಿ ನಸುನಗುತ್ತಲೇ ಬಂದ ಸುಕ್ರಜ್ಜಿ ಮತದಾನ ಮಾಡಿದರು. ಈ ನಂತರ ಮಾತನಾಡಿದ ಅವರು, ಓಟ್ ಹಾಕೋದು ನಮಗೊಂದು ಹಕ್ಕು. ಎಲ್ಲರ ಒಳಿತಾಗಬೇಕ್..ಹಾಲಕ್ಕಿ ಮಕ್ಕಳಿಗೆ ಕೆಲಸಾ ಸಿಗಬೇಕ್ ಎಂದರು.

ಮನೆಯಿಂದಲೇ ಮತದಾನ ಮಾಡುವ ಅವಕಾಶ ಇದ್ದರೂ ಸಹ ಸರ್ಕಾರಿ ಹಿರಿಯ ಶಾಲೆ ಬಡಗೇರಿ ಮತಗಟ್ಟೆ ಸಂಖ್ಯೆ 182 ಕ್ಕೆ ಗಾಲಿ ಕುರ್ಚಿಯ ಸಹಾಯದಿಂದ ಆಗಮಿಸಿ ಮತದಾನ ಮಾಡಿದ ಅವರು ಹಣದ ಆಮೀಷಕ್ಕೆ ಬಲಿಯಾಗಿ ಮತ ಹಾಕಿದರೆ ಉತ್ತಮ ಸರ್ಕಾರದ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ ಯಾವುದೇ ಸರ್ಕಾರ ಬಂದರೂ ಜನರಿಗೆ ಸಹಾಯ ಆಗಬೇಕು.

ಇಂದು ಅತಿ ಕಡಿಮೆ ಹಣಕ್ಕೆ ದಿನಗೂಲಿ ಮಾಡುವ ಪರಿಸ್ಥಿತಿ ನಮ್ಮ ಯುವಕರದಾಗಿದ್ದು ಕಾರವಾರ ಅಂಕೋಲಾ ಭಾಗಗಳಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಬೇಕು, ಹಾಲಕ್ಕಿ ಒಕ್ಕಲಿಗರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಬಹುಕಾಲದ ಬೇಡಿಕೆ ಈಡೇರಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!