ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ್ ಕೊತಕೊತ ಕುದಿಯುತ್ತಿದೆ. ಇಮ್ರಾನ್ ಖಾನ್ ಬಂಧನದಿಂದ ಹಿಂಸಾತ್ಮಕ ಘಟನೆಗಳೊಂದಿಗೆ ಮತ್ತೊಂದು ಕ್ರೌರ್ಯ ನಡೆದಿದೆ. ಡರ್ರಾ ಆದಮ್ಖೇಲ್ ಕೊಹತ್ನಲ್ಲಿರುವ ಕಲ್ಲಿದ್ದಲು ಗಣಿ ವಿಂಗಡಣೆ ವಿವಾದದಲ್ಲಿ ಎರಡು ಬುಡಕಟ್ಟುಗಳ ನಡುವಿನ ಹಿಂಸಾತ್ಮಕ ಘರ್ಷಣೆ ನಡೆದಿದೆ. ಇದರಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ.
ವಿವರಗಳ ಪ್ರಕಾರ, ಕಲ್ಲಿದ್ದಲು ಗಣಿಗಳ ಡಿಲಿಮಿಟೇಶನ್ಗೆ ಸಂಬಂಧಿಸಿದ ವಿವಾದದಲ್ಲಿ ಸುನಿಖೇಲ್ ಮತ್ತು ಅಖೋರ್ವಾಲ್ ನಡುವೆ ಘರ್ಷಣೆಗಳು ನಡೆದಿದ್ದು, 14 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದಾರಾ ಆದಮ್ಖೇಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಾದಾಡುತ್ತಿರುವ ವ್ಯಕ್ತಿಗಳನ್ನು ಹೆಸರಿಸಲಾಗಿದೆ. ಬುಲಂದರಿ ಬೆಟ್ಟದ ಗಡಿರೇಖೆಯ ಬಗ್ಗೆ ಸುನಿಖೇಲ್ ಮತ್ತು ಅಖೋರ್ವಾಲ್ ಬುಡಕಟ್ಟು ನಡುವಿನ ವಿವಾದವು ಬಹಳ ಹಿಂದಿನಿಂದಲೂ ನಡೆಯುತ್ತಿತ್ತು.
ಎರಡೂ ಕಡೆಯ ಸ್ಥಳೀಯ ಜನರ ಹಠಮಾರಿ ಸ್ವಭಾವದಿಂದಾಗಿ, ದುರಂತ ಘಟನೆ ಸಂಭವಿಸಿದೆ ಮತ್ತು ಎರಡೂ ಕಡೆಯವರು ಭಾರೀ ಸಾವುನೋವುಗಳನ್ನು ಅನುಭವಿಸುವಂತಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಇದು ಎರಡು ಬುಡಕಟ್ಟುಗಳ ನಡುವಿನ ದೀರ್ಘಕಾಲದ ವಿವಾದವಾಗಿದೆ. ಮೃತದೇಹಗಳು ಮತ್ತು ಗಾಯಾಳುಗಳನ್ನು ಪೇಶಾವರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.