ಪಾಕಿಸ್ತಾನ ಭಯೋತ್ಪಾದನೆಯನ್ನು ‘ಉದ್ಯಮ’ ಮಾದರಿ ಪ್ರಾಯೋಜಿಸುತ್ತಿದೆ: ವಿದೇಶಾಂಗ ಸಚಿವ ಜೈಶಂಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ’ಉದ್ಯಮ’ ರೀತಿಯಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತೆ ಪ್ರತಿಪಾದಿಸಿದ್ದಾರೆ.

ಮೂರು ದಿನಗಳ ಸಿಂಗಾಪುರ ಭೇಟಿಯಲ್ಲಿರುವ ಅವರು, ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್‌ನಲ್ಲಿ ತಮ್ಮ ಲೇಖಕ ಪುಸ್ತಕ ’ವೈ ಭಾರತ್ ಮ್ಯಾಟರ್ಸ್’ ಕುರಿತು ಉಪನ್ಯಾಸ ಅಧಿವೇಶನದ ನಂತರ ನಡೆದ ಪ್ರಶ್ನೋತ್ತರ ಸುತ್ತಿನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ವಿಶ್ವದ ಪ್ರತೀ ರಾಷ್ಟ್ರವೂ ಉತ್ತಮವಾದ ಸ್ಥಿರ ನೆರೆಹೊರೆಯನ್ನು ಬಯಸುತ್ತದೆ. ಪಾಕಿಸ್ಥಾನ ಇದಕ್ಕೆ ವ್ಯತಿರಿಕ್ತವಾಗಿದೆ. ದುರದೃಷ್ಟವಶಾತ್ ಇದು ಭಾರತದೊಂದಿಗೆ ಮಾತ್ರವಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!