ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಿ ಮಕ್ಕಳು ಕರ್ನಾಟಕದಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ರಾಜ್ಯ ಪಾಕಿಸ್ತಾನದ ಮನೆಯಾಗುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಕಲಬುರಗಿಯ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಾಕಿಸ್ತಾನಿಗಳಿಗೆ ಬೆಳೆಯಲು ಅವಕಾಶ ನೀಡಲಾಗಿದೆ. ಅವರಿಗೆ ಜನನ ಪ್ರಮಾಣಪತ್ರವನ್ನೂ ಕೂಡ ನೀಡುತ್ತಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಜನರು ಭಯೋತ್ಪಾದಕ ಚಟುವಟಿಕೆಗಳಿಂದ ತತ್ತರಿಸುತ್ತಿದ್ದಾರೆ. ಕರ್ನಾಟಕ ಅಭದ್ರತೆಯ ತೋಟವಾಗುತ್ತಿದೆ. ದ್ರೋಹ ಮತ್ತು ರಕ್ತದ ಕಲೆಗಳು ಗೋಚರಿಸುತ್ತಿವೆ. ಕರ್ನಾಟಕವನ್ನು ಶಾಂತಿಯ ತೋಟ ಎಂದು ಕುವೆಂಪು ಅವರು ಕರೆದಿದ್ದಾರೆ ಆದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಶಾಂತಿಯ ತೋಟವನ್ನಾಗಿ ಮಾಡಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಪಾರ್ಲಿಮೆಂಟಿನಲ್ಲಿ ಪಾಕ್ ಪರವಾಗಿ ಮಾತನಾಡಿದವರಲ್ಲಿ ಮೂವರನ್ನು ಬಂಧಿಸಲಾಯಿತು. ಆದಾಗ್ಯೂ, ಇನ್ನೂ ಬಹಳ ಜನ ಇದಕ್ಕೆ ಜೈ ಎಂದಿದ್ದಾರೆ. ಅವರನ್ನು ಕೂಡ ಬಂಧಿಸುವಂತೆ ಅಶೋಕ್ ಒತ್ತಾಯಿಸಿದ್ದಾರೆ.