ರಾಜ್ಯದಲ್ಲಿ ಈಗಾಗಲೇ ನೀರಿಗೆ ಹಾಹಾಕಾರ ಎದ್ದಿದೆ. ದಿನಕ್ಕೆರಡು ಬಾರಿ ಸ್ನಾನ ಮಾಡುತ್ತಿದ್ದ ಜನ ಎರಡು ದಿನಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಇದೆಲ್ಲಾ ಪರವಾಗಿಲ್ಲ, ಎಷ್ಟೋ ಮಂದಿ ಕುಡಿಯುವ ನೀರಿಲ್ಲದೆ ಕಣ್ಣೀರಿಡುತ್ತಿದ್ದಾರೆ. ಯಾವ್ಯಾವುದೇ ನೀರನ್ನು ತಂದು ಶುದ್ಧೀಕರಿಸಿ ಕುಡಿಯುತ್ತಿದ್ದಾರೆ. ಇಡೀ ರಾಜ್ಯಕ್ಕಾಗಿ ನೀವು ನೀರು ಉಳಿಸೋದು ಬೇಡ, ಯಾರೋ ಒಬ್ಬರಿಗಾಗಿ ಉಳಿಸಿ, ನಿಮ್ಮ ಕೈಲಾದಷ್ಟು ಉಳಿಸಿ..
ಅನಾವಶ್ಯಕವಾಗಿ ನೀರು ಬಿಡುವುದು, ಹಲ್ಲುಜ್ಜುವಾಗ ನೀರು ಸುರಿದರೂ ತಲೆ ಕೆಡಿಸಿಕೊಳ್ಳದೇ ಇರುವುದು
ಮಳೆ ನೀರಿನ ಕೊಯ್ಲು, ನೀರಿನ ಮರುಬಳಕೆ
ಮನೆಯ ಟ್ಯಾಂಕ್ ತುಂಬಿ ಹರಿಯುವ ಮುನ್ನವೇ ಮೋಟರ್ ಆಫ್ ಮಾಡುವುದು
ಕಾರ್, ಸ್ಕೂಟಿ ನಿತ್ಯ ವಾಶ್ ಮಾಡದೇ ಇರುವುದು
ವಾಟರ್ ಪ್ಯೂರಿಫೈ ಆಗಲು ತುಂಬುವ ನೀರಿನ ಡಬಲ್ ನೀರು ವೇಸ್ಟ್ ಆಗುತ್ತದೆ. ಅದನ್ನು ತುಂಬಿಟ್ಟುಕೊಂಡು ಪಾತ್ರೆ ತೊಳೆಯಬಹುದು.
ವೆಸ್ಟರ್ಸ್ನ್ ಟಾಯ್ಲೆಟ್ ಬದಲು ಇಂಡಿಯನ್ ಟಾಯ್ಲೆಟ್ ಬಳಕಿ ಮಾಡಬಹುದು.
ಸ್ನಾನಕ್ಕೆ ನೀರು ಬಿಟ್ಟುಕೊಂಡು ಇರುವ ಬದಲು, ಒಂದು ಬಕೆಟ್ ನೀರು ಮೊದಲೇ ತುಂಬಿಸಿ ಅದರಲ್ಲೇ ಸ್ನಾನ ಮಾಡುವುದು