ಚುನಾವಣೆ ಬಂತಲಾ, ಅದ್ಕೆ ಕಾಂಗ್ರೆಸ್ ಜಾತಿ ರಾಜಕಾರಣದ ಆಟ ಆಡ್ತಿರೋದು: ಈಶ್ವರಪ್ಪ ಕಿಡಿ

ಹೊಸದಿಗಂತ ವರದಿ ಶಿವಮೊಗ್ಗ:

ಚುನಾವಣೆ ಬಂದಾಗಲೆಲ್ಲಾ ಕಾಂಗ್ರೆಸ್ ಜಾತಿ ರಾಜಕಾರಣದ ಆಟ ಆಡುತ್ತಾ ಬಂದಿದೆ. ಜಾತಿ ರಾಜಕಾರಣ ದ ಆಟ ನಿಲ್ಲಿಸಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿರುವುದರಿಂದ ದಲಿತ ಮುಖ್ಯಮಂತ್ರಿ ವಿಷಯ ಮುನ್ನೆಲೆಗೆ ತಂದಿದ್ದಾರೆ. ಇಷ್ಟು ವರ್ಷ ಅಧಿಕಾರ ಇದ್ದಾಗ ಯಾಕೆ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಇದೆಲ್ಲಾ ಕಾಂಗ್ರೆಸ್ ಮಾಡಿಕೊಂಡು ಬಂದಿರುವ ಕುತಂತ್ರ ಮತ್ತು ಷಡ್ಯಂತ್ರ. ಇದನ್ನು ನೋಡಿದರೆ ವಾಕರಿಕೆ ಬರುತ್ತದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಈಗ ಬಡಿದಾಟ ಆರಂಭವಾಗಿದೆ.

ಅದನ್ನು ಮರೆಮಾಚಲು ಸಿದ್ದರಾಮಯ್ಯ ತಮ್ಮ ಆಪ್ತ ಮಹದೇವಪ್ಪ ಮೂಲಕ ದಲಿತ ಸಿಎಂ ವಿಷಯ ಚರ್ಚೆಗೆ ತರಿಸಿದ್ದಾರೆ. ಹಾಗಾದರೆ ಡಾ.ಪರಮೇಶ್ವರ ಅವರನ್ನು ಸಿಎಂ ಮಾಡಲು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!