ʼಕೇರಳ ಹರತಾಳಕ್ಕೆʼ ಕರೆ ನೀಡಿದ ಪಿಎಫ್‌ಐ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಕೇರಳ ಹೈಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ವಿರುದ್ಧ ದೇಶದ ಹಲವು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳವು ದಾಳಿ ಮಾಡಿರುವುದನ್ನು ವಿರೋಧಿಸಿ ಕೆರಳದ ಪಿಎಫ್‌ಐ ಸಂಘಟನೆಯು ಒಂದು ದಿನದ ʼಕೇರಳ ಹರತಾಳಕ್ಕೆ  ಕರೆ ನೀಡಿದ್ದು ಇದರ ವಿರುದ್ಧ ಕೇರಳ ಉಚ್ಛ ನ್ಯಾಯಾಲವು ಸ್ವಯಂ ಪ್ರೇರಿತ (ಸು-ಮೋಟೋ) ಕೇಸ್‌ ದಾಖಲಿಸಿದೆ.

ಕೇರಳ ಹೈಕೋರ್ಟ್ ಆದೇಶದ ಪ್ರಕಾರ, ಅನುಮತಿ ಇಲ್ಲದೆ ಯಾರೂ ರಾಜ್ಯದಲ್ಲಿ ಹರತಾಳಕ್ಕೆ ಕರೆ ನೀಡುವಂತಿಲ್ಲ.ಮುಷ್ಕರದ ಕರೆಯನ್ನು ಬೆಂಬಲಿಸದ ಸರ್ಕಾರಿ ಮತ್ತು ನಾಗರಿಕರ ಸಾರ್ವಜನಿಕ/ಖಾಸಗಿ ಆಸ್ತಿಗೆ ಯಾವುದೇ ಹಾನಿಯಾಗದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!