ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಸಚಿವೆ ಆತಿಷಿ ಮರ್ಲೇನಾ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಕೇಜ್ರಿವಾಲ್ಗೆ ಟೈಪ್-2 ಡಯಾಬಿಟಿಸ್ ಇದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಜೈಲಿನಲ್ಲಿ ಪದೇ ಪದೆ ಮನವಿ ಮಾಡಿದ್ರೂ ಇನ್ಸುಲಿನ್ ಕೊಡದೇ ಅವರನ್ನು ಕೊಲ್ಲುವ ಷಡ್ಯಂತ್ರ ರೂಪಿಸಲಾಗಿದೆ. ಕಳೆದ 30 ವರ್ಷಗಳಿಂದ ಅವರಿಗೆ ಈ ಸಕ್ಕರೆ ಕಾಯಿಲೆ ಇದೆ. ಕೇಜ್ರಿವಾಲ್ ಶುಗರ್ ಕಂಟ್ರೋಲ್ನಲ್ಲಿಡಲು ಪ್ರತಿದಿನ 46 ರಿಂದ 54 ಯುನಿಟ್ವರೆಗೆ ಇನ್ಸುಲಿನ್ ಪಡೆಯುತ್ತಾರೆ. ಯಾವುದೇ ವೈದ್ಯರನ್ನು ಕೇಳಿ 54 ಯುನಿಟ್ ಇನ್ಸುಲಿನ್ ಪಡೆಯುವ ವ್ಯಕ್ತಿ ತೀವ್ರ ಡಯಾಬಿಟಿಸ್ ಎದುರಿಸುತ್ತಿರುವ ವ್ಯಕ್ತಿ ಎಂದೇ ಹೇಳುತ್ತಾರೆ.
ಜೈಲಿನಲ್ಲಿ ಕೇಜ್ರಿವಾಲ್ಗೆ ಇನ್ಸುಲಿನ್ ನೀಡುತ್ತಿಲ್ಲ. ಅವರನ್ನು ಕೊಲ್ಲಲು ಬಿಜೆಪಿ ಷಡ್ಯಂತ್ರ ಇದಾಗಿದೆ. ಕೇಜ್ರಿವಾಲ್ ಜನಪ್ರಿಯತೆ ಕಂಡು ಬಿಜೆಪಿ ಹೆದರಿದೆ. ಅವರನ್ನು ಚುನಾವಣೆಯಲ್ಲಿ ಎದುರಿಸಲಾಗದೆ ಅಡ್ಡದಾರಿ ಹಿಡಿದು ಜೈಲಿನಲ್ಲಿ ಕೊಲ್ಲುವ ಪ್ಲಾನ್ ಮಾಡಿದೆ ಎಂದು ಹೇಳಿದ್ದಾರೆ.