ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಚರಣೆಯ ನಿಗಾಕ್ಕೆ ಉಕ್ರೇನ್ ಪಕ್ಕದ ದೇಶಗಳಿಗೆ ಪ್ರಧಾನಿ ಮೋದಿ ಸಚಿವರನ್ನು ನಿಯೋಜಿಸಿದ್ದಾರೆ.
ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ ವಿಕೆ ಸಿಂಗ್ರನ್ನು ಉಕ್ರೇನ್ ನೆರೆಯ ದೇಶಗಳಿಗೆ ತೆರಳಿ ಸ್ಥಳಾಂತರದ ಕಾರ್ಯಾಚರಣೆ ನಡೆಸಲು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸೂಚಿಸಲಾಗಿದೆ.