ದಿಗಂತ ವರದಿ ನಿಡಗುಂದಿ (ವಿಜಯಪುರ):
ಮದ್ಯದ ಅಮಲಿನಲ್ಲಿ ಹರಿಯುವ ಕಾಲುವೆ ನೀರಲ್ಲಿ ಬಿದ್ದು ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿರುವ ಘಟನೆ ಇಲ್ಲಿನ ನಿಡಗುಂದಿ ತಾಂಡಾ ಬಳಿಯ ಆಲಮಟ್ಟಿ ಎಡದಂಡೆ ಕಾಲುವೆ ಬಳಿ ಭಾನುವಾರ ನಡೆದಿದೆ.
ಪಟ್ಟಣದ ನಿವಾಸಿ ಬಸವರಾಜ ಧನಶೆಟ್ಟಿ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ, ಎಡದಂಡೆ ಕಾಲುವೆಗೆ ಜಾರಿ ಬಿದಿದ್ದಾನೆ. ಈ ವೇಳೆ ನಿಡಗುಂದಿ ಪೊಲೀಸ್ ಠಾಣೆ ಸಿಬ್ಬಂದಿ ಎಸ್.ಎಸ್. ಅಂಗಡಗೇರಿ ಕಾಲುವೆ ಪಕ್ಕದ ರಸ್ತೆಯಲ್ಲಿ ಹಾದು ಹೋಗುವ ಸಂದರ್ಭ, ಕಾಲುವೆ ನೀರಲ್ಲಿ ಬಿದ್ದಿರುವ ವ್ಯಕ್ತಿ ನೀರಲ್ಲಿ ಮುಳುಗುತ್ತಿರುವುದನ್ನು ಕಂಡು, ಸ್ಥಳೀಯ ಯುವಕರ ಸಹಾಯದಿಂದ, ವ್ಯಕ್ತಿಯನ್ನು ಕಾಲುವೆಯಿಂದ ಮೇಲೆತ್ತಿ, ರಕ್ಷಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಹಾಗೂ ಯುವಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆ ವ್ಯಕ್ತವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ