ಹೊಸದಿಗಂತ ವರದಿ ಕಲಬುರಗಿ:
ಶಾಸಕ ಪ್ರಿಯಾಂಕ್ ಖಗೆ೯ ಕಾಣೆಯಾಗಿದ್ದಾರೆ ಎಂದು ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಪೋಸ್ಟರ್ ಅಂಟಿಸಿದ್ದರು.ಇದರ ಹಿನ್ನೆಲೆಯಲ್ಲಿ ಬುಧವಾರ ಚಿತ್ತಾಪುರನ ವಾಡಿ ಪಟ್ಟಣದ ಪೋಲಿಸ್ ಠಾಣೆಯ ಎದುರು ಲಘು ಲಾಠಿ ಚಾರ್ಜ್ ನಡೆಸಲಾಗಿದೆ.
ಬೆಳ್ಳಂಬೆಳಿಗ್ಗೆ ಠಾಣೆ ಮುಂಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಯಾಗಿದ್ದರು.ಈ ನಡುವೆ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇವರನ್ನು ತಿಳಿಗೊಳಿಸಲು ಲಘು ಲಾಠಿ ಪ್ರಹಾರ ಮಾಡಲಾಗಿದೆ.
ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ ಮೇಲೆ ಹಲ್ಲೆ ನಡೆದ ಬಗ್ಗೆ ದೂರು ನೀಡಲು ಕಾರ್ಯಕರ್ತರು ಹಾಗೂ ಚವ್ಹಾಣ ಠಾಣೆಗೆ ಆಗಮಿಸಿದ್ದರು.ಇದೇ ವೇಳೆ ಕಾಂಗ್ರೆಸ್ ಕಾಯ೯ಕತ೯ರು ಸಹ ಆಗಮಿಸಿದ್ದರು.ಆಗ ಇವರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಶಾಸಕ ಪ್ರಿಯಾಂಕ್ ಖಗೆ೯ ಕಾಣೆಯಾಗಿದ್ದಾರೆ ಎಂದು ಮಂಗಳವಾರ (ನಿನ್ನೆ) ಬೆಳಿಗ್ಗೆ ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ ಬಿತ್ತಿ ಪತ್ರ ಚಿತ್ತಾಪುರ ಕ್ಷೇತ್ರದಲ್ಲಿ ಅಂಟಿಸಿದ್ದರು.