ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು ನಗರದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ನಿನ್ನೆಯಷ್ಟೇ ಬಿಲ್ಡರ್ ಹಾಗೂ ಕಟ್ಟಡದ ಮಾಲೀಕರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದೀಗ ಸಿಗರೇಟ್ ಹಣ ಕೇಳಿದ್ದಕ್ಕೆ ಬೇಕರಿ ಅಂಗಡಿಯ ಹುಡುಗರನ್ನು ಹಿಗ್ಗಾಮುಗ್ಗಾ ರೌಡಿಗಳು ಥಳಿಸಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಕುಂದಲಹಳ್ಳಿ ಗೇಟ್ ಬಳಿಯ ಬ್ರಹ್ಮಲಿಂಗೇಶ್ವರ ಬೇಕರಿಗೆ ನಾಲ್ವರು ಪುಡಿ ರೌಡಿಗಳ ಗುಂಪು ಸಿಗರೇಟ್ ಸೇದಲು ತೆರಳಿದೆ. ಬೇಕರಿ ಅಂಗಡಿಯ ಹುಡುಗ ಸಿಗರೇಟ್ ಕೇಳಿದ್ದಕ್ಕೆ ನೀಡಿದ್ದಾನೆ. ಬಳಿಕ ಸಿಗರೇಟ್ ಹಣ ಕೇಳಿದ್ದಕ್ಕೆ ಬೇಕರಿ ಹುಡುಗರನ್ನು ಹಿಗ್ಗಾಮುಗ್ಗಾ ಥಳಿಸಿರೋದಾಗಿ ತಿಳಿದು ಬಂದಿದೆ.
ಹಲ್ಲೆಗೊಳಗಾದಂತ ಬೇಕರಿ ಹುಡುಗರು ಹೆಚ್ ಎ ಎಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡು, ಪುಡಿ ರೌಡಿಗಳನ್ನು ಎಡೆಮುರಿ ಕಟ್ಟೋದಕ್ಕೆ ಬಲೆ ಬೀಸಿದ್ದಾರೆ.