ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸ್- ರಾಮನಾಗಿ, ಕೃತಿ ಸನೋನ್- ಸೀತೆಯಾಗಿ, ಸೈಫ್ ಅಲಿಖಾನ್- ರಾವಣಾಸುರನಾಗಿ ಆಗಿ ಓಂ ರಾವುತ್ ನಿರ್ದೇಶಿಸಿದ ಚಲನಚಿತ್ರ ಆದಿಪುರುಷ್. ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದಿಪುರುಷ ಚಿತ್ರ ಜೂನ್ 16 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಸದ್ಯದಲ್ಲೇ ಪ್ರಚಾರ ಆರಂಭಿಸಲಿದೆ.
ಹೀಗಿರುವಾಗ ಭದ್ರಾಚಲಂ ಸೀತಾರಾಮಾಲಯಕ್ಕೆ ಪ್ರಭಾಸ್ 10 ಲಕ್ಷ ದೇಣಿಗೆ ಕಳುಹಿಸಿದ್ದರು. ಪ್ರಭಾಸ್ ಪರವಾಗಿ ಅವರ ಸಂಬಂಧಿಕರಾದ ದಂತುಲೂರಿ ಸತ್ಯನಾರಾಯಣ ರಾಜು, ವೇಮರೆಡ್ಡಿ, ವಿಕ್ರಮ್, ಶ್ರೀನಿವಾಸ ರೆಡ್ಡಿ… ಹಲವರು ಭದ್ರಾಚಲಂ ದೇವಸ್ಥಾನದ ಈವೋ ರಮಾದೇವಿ ಅವರಿಗೆ ಹತ್ತು ಲಕ್ಷದ ಚೆಕ್ ನೀಡಿ, ನಂತರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರ ಹಿಟ್ ಆಗುವಂತೆ ದೇವರಲ್ಲಿ ಮೊರೆಯಿಟ್ಟರು.
ಈ 10 ಲಕ್ಷವನ್ನು ಅನ್ನದಾನ, ಗೋಶಾಲೆ ವಿಸ್ತರಣೆ ಹಾಗೂ ದೇವಸ್ಥಾನದ ಅಗತ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಇವೊ ರಮಾದೇವಿ ತಿಳಿಸಿದರು.