ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ ಆರು ಜನದ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಗ್ಗಲೀಪುರ ಠಾಣೆಯಲ್ಲಿ 306 ಅನ್ವಯ (ಆತ್ಮಹತ್ಯೆಗೆ ಪ್ರಚೋದನೆ) ಎಫ್ಐಆರ್ ದಾಖಲಾಗಿದೆ. ಪ್ರದೀಪ್ ಪತ್ನಿ ದೂರು ನೀಡಿದ್ದು, ಪ್ರದೀಪ್ ಡೆತ್ನೋಟ್ನಲ್ಲಿ ಅರವಿಂದ ಲಿಂಬಾವಳಿ, ರಮೇಶ್ ರೆಡ್ಡಿ, ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್ ಹಾಗೂ ಸೋಮಯ್ಯ ಹೆಸರನ್ನು ಬರೆದಿದ್ದರು.
ಉದ್ಯಮಿ ಪ್ರದೀಪ್ ಕಾರಿನಲ್ಲಿ ಕುಳಿತು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ತನ್ನ ಸಾವಿಗೆ ಇವರೇ ಕಾರಣ ಎನ್ನುವ ನೋಟ್ ಕೂಡ ಕಾರಿನಲ್ಲಿ ಸಿಕ್ಕಿತ್ತು.