ಹೊಸದಿಗಂತ ವರದಿ ಚಿತ್ರದುರ್ಗ:
ರಸ್ತೆ ಅಪಘಾತದಲ್ಲಿ ತೀವ್ರವಾಗ ಗಾಯಗೊಂಡು ಮೃತಪಟ್ಟ ಪ್ರದೀಪ್ ಅವರ ಕುಟುಂಬದವರು ಮೃತನ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಮಾನವೀಯತೆ ಮರೆದಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಗೇಟ್ನಲ್ಲಿ ಏಕಾಏಕಿ ನುಗ್ಗಿ ಬಂದ ಕಾರು ಅಂಗಡಿ ಮುಂದೆ ನಿಂತಿದ್ದ ಪ್ರದೀಪ್ ದಗ್ಗೆಯವರ ಮೇಲೆ ಹರಿದಿತ್ತು.ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪ್ರದೀಪ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಅವರ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಅವರನ್ನು ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸಗೆ ಸ್ಪಂದಿಸದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇದನ್ನೂ ಓದಿ:
ಪ್ರದೀಪ್ ಸಾವಿನ ಬಳಿಕ ಅವರ ಕುಂಟುಂಬ ಬಸವೇಶ್ವರ ಅಸ್ಪತ್ರೆಗೆ ಮೃತನ ನೇತ್ರದಾನ ಮಾಡಿದ್ದಾರೆ. ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮರೆದ ಪ್ರದೀಪ್ ಕುಟುಂಬದವರ ಕುರಿತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದೇ ಸಂದರ್ಭದಲ್ಲಿ ಕಾರು ಟಿ.ನೂಲೇನೂರು ಗ್ರಾಮದ ದಲಿತ ಕುಟುಂಬದ ದಿ.ಮೂರ್ತಿ ಎಂಬುವರ ಮಗಳಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಅವರ ಕಾಲಿಗೆ ಹಾನಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.



