ಪ್ರಜ್ವಲ್ ರೇವಣ್ಣ​​ ಪ್ರಕರಣ: ಟ್ವೀಟ್​ ಮೂಲಕ HDK ವಿರುದ್ಧ ಡಿಕೆ ಶಿವಕುಮಾರ್​​ ಅಟ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಜ್ವಲ್ ರೇವಣ್ಣ ಪ್ರಕರಣ ಸದ್ಯ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಚುನಾವಣೆ ಮುಗಿದರೂ ಎರಡೂ ಪಕ್ಷಗಳು ಆರೋಪ-ಪ್ರತ್ಯಾರೋಪಗಳ ಮಹಾಪೂರವನ್ನೇ ಎದುರಿಸುತ್ತಿವೆ. ಅದಕ್ಕಾಗಿಯೇ ದ.ಕ. ಅದರಂತೆ ಇದೀಗ ಟ್ವೀಟ್​ ಮೂಲಕ ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್​​ ಅಟ್ಯಾಕ್ ಮಾಡಿದ್ದಾರೆ.

​ಕುಮಾರಸ್ವಾಮಿ ಹಿಟ್‌ ಆ್ಯಂಡ್​ ರನ್‌ ಗಿರಾಕಿ ಅನ್ನೋದು ಜನರಿಗೆ ಗೊತ್ತಿದೆ. ಈ ಹಿಂದಿನ ಯಾವುದೇ ಆರೋಪಗಳು ಸಾಭೀತಾಗಿಲ್ಲ. ಇನ್ನು ಪ್ರಜ್ವಲ್‌ ಸೆಕ್ಸ್​​ಗೇಟ್‌ ಕೇಸ್​ನಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ, ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೇವಣ್ಣ ಕುಟುಂಬದಿಂದ ನಮ್ಮ ಕುಟುಂಬ ಬೇರ್ಪಟ್ಟಿದೆ ಎಂದು ಅವರೇ ಹೇಳಿದ್ದರು. ಉಪ್ಪು ತಿಂದರೆ ನೀರು ಕುಡಿಯಬೇಕು, ಈಗ ಯಾಕೆ ಮತ್ತೆ ಹಿಟ್‌ ಅಂಡ್‌ ರನ್‌ ಮಾಡ್ತಿದ್ದಾರೆ?. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗಲೇ ತೀರ್ಪು ಕೊಡುವುದಕ್ಕೆ ಕುಮಾರಸ್ವಾಮಿ ಅವರೇನು ಲಾಯರೋ? ಜಡ್ಜೋ?. ಚರ್ಚೆ ಮಾಡಲು ಇನ್ನೂ ಟೈಮ್ ಇದೆ. ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದು ಡಿಕೆ ಶಿವಕುಮಾರ್​ ತಮ್ಮ ಎಕ್ಸ್​ ಖಾತೆ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!