ಹನುಮ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ: 2 ಲಕ್ಷ ಜನರಿಗೆ ಊಟ ತಯಾರಿ

ಹೊಸದಿಗಂತ ವರದಿ ಗಂಗಾವತಿ:

ಅಂಜನಾದ್ರಿ ಗೆ ಆಗಮಿಸುವ ಮಾಲಾಧಾರಿಗಳಿಗೆ ಬೆಳಗ್ಗೆ 4 ರಿಂದ ಪ್ರಸಾದ ಸೇವೆ ಆರಂಭಿಸಲಾಗಿದ್ದು, ಈವರೆಗೆ 60 ಸಾವಿರ ಭಕ್ತರು ಪ್ರಸಾದ ಸೇವಿಸಿದ್ದಾರೆ.
ಕೊಪ್ಪಳ ಜಿಲ್ಲಾಡಳಿತ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದು, ಸುಮಾರು 2 ಲಕ್ಷ ಜನರಿಗೆ ಅಡುಗೆ ತಯಾರಿಸಲಾಗಿದೆ. ಬೆಳಗ್ಗೆ ಟಿಫಿನ್ ಗೆ ಉಪ್ಪಿಟ್ಟು, ಶಿರಾ ತಯಾರಿಸಲಾಗಿತ್ತು. ಊಟಕ್ಕೆ ಅನ್ನ, ಸಾಂಬಾರು, ಗೋಧಿ ಪಾಯಸ ತಯಾರಿಸಲಾಗಿದೆ. ಭಕ್ತರು ಹನುಮನ ದರ್ಶನ ಮಾಡಿ ಬಂದು ಪ್ರಸಾದ ಸೇವನೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!