ರಾಮಾನುಜಾಚಾರ್ಯರ ಸಮತಾಮೂರ್ತಿ ಸ್ವರ್ಣ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿನ ಮುಚ್ಚಿಂತಲ್​ ಪ್ರದೇಶದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ 54 ಅಡಿ ಎತ್ತರದ 120 ಕೆಜಿ ಚಿನ್ನದಿಂದ ಕೂಡಿದ ರಾಮಾನುಜಾಚಾರ್ಯರ ಸಮತಾಮೂರ್ತಿ ಸ್ವರ್ಣ ಪ್ರತಿಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಲೋಕಾರ್ಪಣೆ ಮಾಡಿದರು.
ಸ್ವರ್ಣ ಪ್ರತಿಮೆ ಲೋಕಾರ್ಪಣೆಗೂ ಮುನ್ನರಾಮಾನುಜಾಚಾರ್ಯರ ಸಮಾನತಾ ಪ್ರತಿಮೆ ದರುಶನ ಪಡೆದ ಕೋವಿಂದ್​ ಅವರು ,108 ವೈಷ್ಣವ ದೇವಾಲಯಗಳನ್ನು ವೀಕ್ಷಿಸಿದರು.
ಶ್ರೀ ಜಗದ್ಗುರು ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಪ್ರಧಾನಿಮೋದಿ ಅವರು 216 ಅಡಿ ಎತ್ತರದ ರಾಮಾನುಜಾಚಾರ್ಯರ ಸಮಾನತಾ ಪ್ರತಿಮೆ ಅನಾವರಣಗೊಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!