ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಭೇಟಿ ನೀಡಿದ್ದು, ಜನ ಶಕ್ತಿ (Jana Shakti)ಪ್ರದರ್ಶನವನ್ನು ವೀಕ್ಷಿಸಿದರು.
ಮೋದಿಯವರ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಅವರು ಹೇಳಿದ್ದ ಸ್ವಚ್ಛತೆ, ಜಲ ಸಂರಕ್ಷಣೆ, ಕೃಷಿ, ಬಾಹ್ಯಾಕಾಶ, ಈಶಾನ್ಯ ಪ್ರದೇಶ, ಮಹಿಳಾ ಸಬಲೀಕರಣ, ಯೋಗ ಮತ್ತು ಆಯುರ್ವೇದ ವಿಷಯದ ಕುರಿತು ಭಾರತದ ಪ್ರಸಿದ್ಧ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಂಡಿವೆ .
ಕಲಾವಿದೆ ಮಾಧವಿ ಪಾರೇಖ್, ಅತುಲ್ ದೋಡಿಯಾ, ಪದ್ಮಶ್ರೀ ಪುರಸ್ಕೃತ ಪರೇಶ್ ಮೈತಿ, ಸಮಕಾಲೀನ ಕಲಾವಿದ ಈರಣ್ಣ ಜಿಆರ್ ಮತ್ತು ಜಗನ್ನಾಥ ಪಾಂಡಾ ಸೇರಿದಂತೆ ಹಲವಾರು ಕಲಾವಿದರು ಜನ ಶಕ್ತಿಗೆ ತಮ್ಮ ಕೃತಿಗಳನ್ನು ನೀಡಿದ್ದಾರೆ. ಅವುಗಳನ್ನು ಪ್ರಧಾನಿ ಮೋದಿ ವೀಕ್ಷಿಸಿದರು.
ಬಳಿಕ ಟ್ವೀಟ್ ಮಾಡಿದ ಅವರು, ನಾನು ದೆಹಲಿ ಎನ್ಜಿಎಂಎಗೆ ಭೇಟಿ ನೀಡಿದ್ದೆ. ಮನ್ ಕಿ ಬಾತ್ ಸಂಚಿಕೆಗಳಲ್ಲಿನ ಕೆಲವು ವಿಷಯಗಳನ್ನು ಆಧರಿಸಿದ ಅದ್ಭುತ ಕಲಾಕೃತಿಗಳ ಪ್ರದರ್ಶನ ಇದಾಗಿದೆ. ಪ್ರದರ್ಶನವನ್ನು ತಮ್ಮ ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದ ಎಲ್ಲಾ ಕಲಾವಿದರನ್ನು ನಾನು ಅಭಿನಂದಿಸುತ್ತೇನೆಎಂದರು.
Here are some more glimpses from Jana Shakti exhibition at @ngma_delhi. pic.twitter.com/Cz9WmOuLK0
— Narendra Modi (@narendramodi) May 14, 2023
ಏಪ್ರಿಲ್ 30 ರಂದು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ನ 100 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದು ನನ್ನ ಆಧ್ಯಾತ್ಮಿಕ ಪ್ರಯಾಣ ಎಂದಿದ್ದರು. ಕಾರ್ಯಕ್ರಮದಲ್ಲಿ ಅವರು ಮನ್ ಕಿ ಬಾತ್ ಒಂದು ಮಾಧ್ಯಮವಾಗಿದ್ದು, ಜನರು ಇತರ ನಾಗರಿಕರ ಕೆಲಸಗಳನ್ನು ಕಲಿಯಲು ಮತ್ತು ಪ್ರೇರೇಪಿಸಲು ಮತ್ತು ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನ್ ಕಿ ಬಾತ್ ಮೂಲಕ ಬೆಳೆದ ಚಳುವಳಿಗಳು ಮತ್ತು ಸಣ್ಣ ಉದ್ಯಮಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿಸ್ವಚ್ಛ ಭಾರತ್, ಖಾದಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆಯೂ ಚರ್ಚಿಸಿದ್ದಾರೆ.