ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಶ್ರೀರಾಮಪ್ರಾಣ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದಂತೆ ಪ್ರಧಾನಿ ಮೋದಿ ಆಂಧ್ರಪ್ರದೇಶದ ಲೇಪಾಕ್ಷಿಯ ವೀರಭದ್ರೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ರಾಮಾಯಣದಲ್ಲಿ ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಜಟಾಯು ಇದೇ ಜಾಗದಲ್ಲಿ ರಾವಣನ ಬೆನ್ನುಹತ್ತಿ ಹೋರಾಟ ನಡೆಸಿತ್ತು. ನಂತರ ರಾವಣನ ದಾಳಿಗೆ ಜರ್ಜರಿತವಾಗಿ ಬಿದ್ದಿದ್ದ ಜಟಾಯು ಶ್ರೀರಾಮ ಬರುವವರೆಗೂ ತನ್ನ ಪ್ರಾಣ ಉಳಿಸಿಕೊಂಡು, ಶ್ರೀರಾಮನಿಗೆ ಸೀತೆಯನ್ನು ರಾವಣ ಅಪಹರಿಸಿದ್ದಾನೆ ಎಂದು ಹೇಳಿ ಪ್ರಾಣ ಬಿಟ್ಟಿತ್ತು.
ನಂತರ ಇದೇ ಸ್ಥಳದಲ್ಲಿ ಶ್ರೀರಾಮ ಜಟಾಯುವಿನ ಅಂತ್ಯಕ್ರಿಯೆ ನಡೆಸಿದ್ದ ಎಂಬ ಪ್ರತೀತಿ ಇದೆ.