ಹೊಸದಿಗಂತ ವರದಿ, ಕಲಬುರಗಿ
ಶಾಸಕ ಪ್ರಿಯಾಂಕ್ ಖಋಗೆ ಅವರು ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿರುವುದು ನಾಚಿಕೆಗೇಡು ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ ಕಿಡಿಕಾರಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಹೇಳಿಕೆ ಕೇಳಿದ ಮೇಲೆ ನಾವು ರಾಜಕೀಯ ಕ್ಷೇತ್ರದಲ್ಲಿ ಇರಬೇಕೋ ಅಥವಾ ಬೇಡವೋ ಎಂಬುದನ್ನು ಯೋಚಿಸುವಂತಾಗಿದೆ ಎಂದರು.
ಈ ರೀತಿ ಹೇಳಿಕೆ ಕೊಡುವವರು ರಾಜಕೀಯದಲ್ಲಿ ಇರಬಾರದು. ಕಾಂಗ್ರೆಸ್ ಪಕ್ಷ ನೆಲಕಚ್ಚುತ್ತಿರುವುದರಿಂದ ಅವರಿಗೆ ತಲೆ ಕೆಟ್ಟು ಹೋದಂತಾಗಿದೆ. ಹೀಗಾಗಿ ಈ ರೀತಿಯಾಗಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಪ್ರತಿನಿತ್ಯ ವಿವಾದಾತ್ಮಕ ಹೇಳಿಕೆ ನೀಡುವುದು ಒಳ್ಳೆಯ ಸಂಗತಿ ಅಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಹೇಳಿಕೆ ನಾಚಿಕೆಗೇಡಿನ ವಿಚಾರ: ಬಾಬುರಾವ್ ಚಿಂಚನಸೂರ
ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ʼಲಂಚ- ಮಂಚʼದ ಹೇಳಿಕೆ ನಿಜಕ್ಕೂ ನಾಚಿಕೆಗೇಡಿನ ಹೇಳಿಕೆ ಎಂದು ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ ಸಹ ಖಂಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತಾಂಬೆ ಒಬ್ಬ ಹೆಣ್ಣು ಮಗಳು. ನಮ್ಮ ಅಕ್ಕ-ತಂಗಿಯರು ಕೂಡ ಹೆಣ್ಣು ಮಕ್ಕಳಾಗಿದ್ದಾರೆ. ಹೆಣ್ಣಿನ ಬಗ್ಗೆ ಈ ರೀತಿ ಕೆಳಮಟ್ಟದ ಹೇಳಿಕೆ ಖಂಡನೀಯ ಎಂದರು.
ಪ್ರಿಯಾಂಕ್ ಖರ್ಗೆ ಅವರ ನಡತೆ, ಅವರ ಗರ್ವ ಎನಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. 2023ರ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಗತಿ ಎನಾಗುತ್ತೊ ಎಂಬುದು ಕರ್ನಾಟಕದ ಜನತೆ ನೋಡಲಿದ್ದಾರೆ ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜ ಶೇ. 46% ಅಷ್ಡಿದ್ದು, ನನ್ನ ಶಕ್ತಿ ಈ ಹಿಂದಿನ ಚುನಾವಣೆಯ ಸಮಯದಲ್ಲಿಯೇ ಗೊತ್ತಾಗಿದೆ. ಅದಲ್ಲದೇ 2023ರ ಚುನಾವಣೆಯಲ್ಲಿ ಸಹ ಬಾಬುರಾವ್ ಶಕ್ತಿ ಎನಿದೆ ಎಂಬುದು ಹೈಕಮಾಂಡ್ ಗೆ ತಿಳಿಯಲಿದೆ ಎಂದು ಹೇಳಿದರು.