ಹೊಸದಿಗಂತ ವರದಿ ಮೈಸೂರು:
ಮೈಸೂರಿನ ಮೈಲಾರಿ ಹೋಟೆಲ್ನಲ್ಲಿ ಇಡ್ಲಿ, ದೋಸೆ ಸವಿದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಫುಲ್ ಖುಷ್ ಆಗಿದ್ದಾರೆ. ಮಂಗಳವಾರ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಚುನಾವಣೆ ಪ್ರಚಾರ ನಡೆಸಿ, ಅಲ್ಲಿಯೇ ವಾಸ್ತವ್ಯವಿದ್ದ ಪ್ರಿಯಾಂಕ ಗಾಂಧಿ, ಬುಧವಾರ ಬೆಳಗ್ಗೆ ಮೈಸೂರು ಮೈಲಾರಿ ಹೊಟೇಲ್ಗೆ ಆಗಮಿಸಿ ಇಡ್ಲಿ ದೋಸೆ ಸವಿದರು.
ಬಳಿಕ ಮಾತನಾಡಿದ ಪ್ರಿಯಾಂಕಾ ಇಡ್ಲಿ, ದೋಸೆ ತುಂಬಾ ಚೆನ್ನಾಗಿತ್ತು. ಮನೆಯಲ್ಲಿ ಹೇಗೆ ಮಾಡಬೇಕು ಅನ್ನೋದನ್ನು ತಿಳಿದುಕೊಂಡಿದ್ದೀನಿ. ನಾನು ಕೂಡ ಇದನ್ನ ಮನೆಯಲ್ಲಿ ಟ್ರೈ ಮಾಡ್ತೀನಿ ಎಂದು ಹೇಳಿದರು.