ಸ್ಮಶಾನ ವಿಚಾರಕ್ಕೆ ಉದ್ವಿಗ್ನ: ಮಂಜೇಶ್ವರದ ಉದ್ಯಾವರ ಮಾಡ ಪರಿಸರದಲ್ಲಿ ನಿಷೇಧಾಜ್ಞೆ!

ಹೊಸದಿಗಂತ ವರದಿ ಕಾಸರಗೋಡು: 

ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಮಾಡ ಕ್ಷೇತ್ರ ಪರಿಸರದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯ ಹಿನ್ನೆಲೆಯಲ್ಲಿ ಮೇ 6ರ ರಾತ್ರಿಯಿಂದ ಮೇ 8 ರ ರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಆದೇಶ ಹೊರಡಿಸಿದ್ದಾರೆ.

ಇಲ್ಲಿನ ಸ್ಮಶಾನ ಜಾಗ ಮತ್ತು ರಸ್ತೆ ವಿಚಾರದಲ್ಲಿ ಸಮಸ್ಯೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಈ ನಿಷೇಧಾಜ್ಞೆ ಹೇರಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಲಭಿಸಿದ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ಈ ನಿಷೇಧಾಜ್ಞೆ ಹೊರಡಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಠಾರಿ, ಬಂದೂಕು ಸೇರಿದಂತೆ ಇತರ ಮಾರಕಾಯುಧ ವಶದಲ್ಲಿರಿಸಿಕೊಳ್ಳುವುದು, ಸಾಗಿಸುವುದು, ವ್ಯಕ್ತಿಗಳನ್ನು ಅವಮಾನಿಸುವುದು, ಘೋಷಣೆ, ಮೆರವಣಿಗೆ ನಡೆಸುವುದು, ಹಾಡುಗಳನ್ನು ಹಾಡುವುದು, ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಸಾರ್ವಜನಿಕ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!