ಸೋಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ: ‘ಭಾರತ ಜಿಂದಾಬಾದ್’ ಎಂದ ಪಾಕ್ ಮೀನುಗಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅರಬ್ಬಿ ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳ್ಳರಿಂದ ಭಾರತೀಯ ನೌಕಾಸೇನೆಯು ಪಾಕಿಸ್ತಾನದ ಮೀನುಗಾರರನ್ನು ಹಾಗೂ ಹಡಗನ್ನು ರಕ್ಷಿಸಿದ್ದಾರೆ .

ಭಾರತೀಯ ನೌಕಾಪಡೆಯ ಕ್ಷಿಪ್ರ ಕಾರ್ಯಾಚರಣೆಯಿಂ ಬದುಕಿದ ಪಾಕಿಸ್ತಾನದ 23 ಮೀನುಗಾರರು ‘ಭಾರತ ಜಿಂದಾಬಾದ್ ಘೋಷಣೆ’ ಕೂಗಿದ್ದಾರೆ. ಇದೇ ವೇಳೆ ಭಾರತೀಯ ನೌಕಾಪಡೆಗೆ ಧನ್ಯವಾದ ಹೇಳಿದ್ದಾರೆ.

12 ಗಂಟೆಗೆ ಸುದೀರ್ಘ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಸೊಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನದ 23 ಸಿಬ್ಬಂದಿಗಳನ್ನು ರಕ್ಷಿಸಿದೆ.

ಭಾರತೀಯ ವಾಯುಪಡೆ ಸಮುದ್ರದಲ್ಲಿ ಹದ್ದಿನ ಕಣ್ಣಿಟ್ಟಿದೆ.ವಿವಿಧ ದೇಶಗಳ ಸರಕು ಹಡಗು, ಮೀನುಗಾರರ ಹಡುಗು ಸೇರಿದಂತೆ ಹಲವು ಹಡುಗಳನ್ನು ರಕ್ಷಿಸಿ, ಸಿಬ್ಬಂದಿಗಳನ್ನು ರಕ್ಷಿಸುತ್ತಿರುವ ಭಾರತೀಯ ನೌಕಾಪಡೆಗೆ ವಿಶ್ವದೆಲ್ಲೆಡೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಾರ್ಚ್ 29ರ ಮುಂಜಾನೆ ಸೊಮಾಲಿಯಾ ಕಡಲ್ಗಳ್ಳರು ಪಾಕಿಸ್ತಾನದ ಎಫ್‌ಇ ಅಲ್-ಕಂಬಾರ್ ಹಡಗಿನ ಮೇಲೆ ಆಕ್ರಮಣ ಮಾಡಿರುವ ಮಾಹಿತಿ ಪಡೆದ ಭಾರತದ ನೌಕಾಪಡೆ ನೇರವಾಗಿ ರಕ್ಷಣೆಗೆ ಧಾವಿಸಿತ್ತು. ಪಾಕಿಸ್ತಾನದ ಈ ಹಡಗು 23 ಪಾಕಿಸ್ತಾನ ಸಿಬ್ಬಂದಿಗಳನ್ನು ಒಳಗೊಂಡಿತ್ತು. ಐಎನ್‌ಎಸ್ ಸುಮೇಧಾ ಹಾಗೂ ಐಎನ್‌ಎಸ್ ತ್ರಿಶೂಲ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿತ್ತು. ಯಾವುದೇ ರಕ್ಷಪಾತವಿಲ್ಲದೆ ಸೊಮಾಲಿಯಾ ಕಡಲ್ಗಳ್ಳರನ್ನು ಭಾರತೀಯ ನೌಕಾಪಡೆ ಶರಣಾಗುವಂತೆ ಮಾಡಿದೆ.

ಪಾಕಿಸ್ತಾನಿ ಸಿಬ್ಬಂದಿಗಳನ್ನು ರಕ್ಷಿಸಿದ ಬಳಿಕ ಭಾರತದ ನೌಕಾಪಡೆ ಕಾರ್ಯಾಚರಣೆ ಹಾಗೂ ನೆರವಿನ ಹಸ್ತಚಾಚಿ ರಕ್ಷಣೆ ಮಾಡಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಭಾರತ ಜಿಂದಾಬ್ ಘೋಷಣೆ ಕೂಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!