ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವ CWRCಆದೇಶ ಖಂಡಿಸಿ, ಕನ್ನಡ ಪರ ಸಂಗಟನೆಗಳ ಪ್ರತಿಭಟನೆಗಳು ಮುಂದುವರಿದಿವೆ. ಮಳೆ ಸುರಿದರೂ ಲೆಕ್ಕಿಸದೆ ಚಾಮರಾಜನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿರು.
ನಗರದ ಭುವನೇಶ್ವರಿ ವೃತ್ತದಲ್ಲಿ ಕೈಯಲ್ಲಿ ತೆಂಗಿನ ಕಾಯಿ ಚಿಪ್ಪು ಹಿಡಿದು, ಕಿವಿಗೆ ಹೂ ಮುಡಿದು ಪ್ರತಿಭಟನೆ ನಡೆಸಿದರು. ನಾಲಾಯಕ್ ರಾಜಕಾರಣಿಗಳೆಂದು ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.