ಪಿಎಸ್ಐ ನೇಮಕಾತಿ ಅಕ್ರಮ: ಆರೋಪಿ ಕಾಶಿನಾಥ್ ಮತ್ತೆ 7 ದಿನ ಸಿಐಡಿ ಕಸ್ಟಡಿಗೆ

ಹೊಸದಿಗಂತ ವರದಿ, ಕಲಬುರಗಿ:

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಅಕ್ರಮದ ಕಿಂಗ್ ಪಿನ್ ಕಾಶಿನಾಥ್, ನನ್ನು ಪುನಃ 7 ದಿನಗಳ ಕಾಲ ಸಿಐಡಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಕಿಂಗ್ ಪಿನ್ ಕಾಶಿನಾಥ್, ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲದೇ,ಎಮ್.ಎಸ್. ಐ.ಕಾಲೇಜಿನ ಪರೀಕ್ಷೆ ಅಕ್ರಮದಲ್ಲೂ ಸಹ ಭಾಗಿಯಾಗಿರುವ ಶಂಕೆ ಆಧಾರದ ಮೇಲೆ ಮತ್ತೆ ಸಿಐಡಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಎಮ್.ಎಸ್. ಐ.ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಪ್ರಭು,ಗೆ ಕಾಶಿನಾಥ್ ಸಾತ್ ನೀಡಿದ್ದು,ಈ ಹಿನ್ನಲೆಯಲ್ಲಿ ಮತ್ತೆ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಕಾಶಿನಾಥ್ ಮನೆ ಸಚ್೯
ಇನ್ನೂ ಕಾಶಿನಾಥ್, ನನ್ನು ವಶಕ್ಕೆ ಪಡೆದು ,ತಾಜ್ ಸುಲ್ತಾನಪುರ,ದಲ್ಲಿರುವ ಆತನ ಮನೆಗೆ ತೆರಳಿ ಅಗತ್ಯ ಮಾಹಿತಿಗಳನ್ನು ಸಿಐಡಿ ಅಧಿಕಾರಿಗಳು ಶೋಧ ಮಾಡುತ್ತಿದ್ದಾರೆ. ಪ್ರಭು,ಗೆ ಆರ್.ಡಿ.ಪಾಟೀಲ್ ಮುಖಾಂತರ ಕಾಶಿನಾಥ್ ಸಂಪರ್ಕ ಮಾಡಿಕೊಂಡಿದ್ದನು ಎಂದು ಸಿಐಡಿ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!