ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಸಿಎಂ ಭಗವಂತ್ ಮಾನ್ ಇಂದು ತೆಲಂಗಾಣಕ್ಕೆ ಬರಲಿದ್ದು, ಹೈದರಾಬಾದ್ನ ಪ್ರಗತಿ ಭವನದಲ್ಲಿ ಸಿಎಂ ಕೆಸಿಆರ್ ಭೇಟಿಯಾಗಿ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿವೆ. ನಂತರ ಭಗವಂತಮಾನ್ ಹಲವು ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಲಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಪಂಜಾಬ್ನ ಮೊಹಾಲಿಯಲ್ಲಿ ನಡೆಯಲಿರುವ ಹೂಡಿಕೆ ಶೃಂಗಸಭೆಗೆ ಅವರನ್ನು ಆಹ್ವಾನಿಸಲಾಗುತ್ತದೆ. ಪಂಜಾಬ್ ಅಸೆಂಬ್ಲಿ ಸ್ಪೀಕರ್ ಸರ್ದಾರ್ ಕುಲ್ತಾರ್ ಸಿಂಗ್ ಸಂಧ್ವನ್ ಕೂಡ ಇದೇ ತಿಂಗಳ 24 ರಂದು ತೆಲಂಗಾಣಕ್ಕೆ ಬರಲಿದ್ದಾರೆ. ಅವರೊಂದಿಗೆ ಉಪಸಭಾಪತಿ ಜೈಕಿಶನ್ ಸಿಂಗ್ ರೌರಿ, ರಾಜ್ಯಸಭಾ ಸದಸ್ಯರಾದ ವಿಕ್ರಮ್ ಜೀತ್ ಸಿಂಗ್ ಸಾಹ್ನಿ, ಶಾಸಕ ಕುಲವಂತ್ ಸಿಂಗ್ ಪಂಡೋರಿ ಸೇರಿದಂತೆ ಇಬ್ಬರು ನಾಯಕರು ಹೈದರಾಬಾದ್ಗೆ ಆಗಮಿಸಲಿದ್ದಾರೆ.