ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ಕೊನೆಯಾಗಲಿದೆ. ಈ ಮಧ್ಯೆ ಅರುಣ್ ಸಾಗರ್ ಮನೆಯಿಂದ ಹೊರನಡೆದಿದ್ದಾರೆ. ಮಗಳು ಅದಿತಿ ಸಾಗರ್ಗೆ ಗಾಯವಾದ ಸುದ್ದಿ ತಿಳಿದ ನಂತರ ಅರುಣ್ ಮನೆಯಿಂದ ಹೊರಬಂದಿದ್ದಾರೆ. ತದನಂತರ ಮಗಳನ್ನು ನೋಡಿ ಮನೆಗೆ ವಾಪಾಸಾಗಿದ್ದಾರೆ.
ಕನ್ಫೆಷನ್ ರೂಂನಲ್ಲಿ ವಿಷಯ ತಿಳಿಸಿದ್ದು, ಅರುಣ್ ಮನಸ್ಸಿಗೆ ಭಾರೀ ನೋವಾಗಿದೆ. ಮಗಳು ಬಿದ್ದು ಪೆಟ್ಟು ಮಾಡಿಕೊಂಡಿದ್ದಾಳೆ. ಹೆದರುವ ಅವಶ್ಯಕತೆ ಇಲ್ಲ. ಈಗ ಆರಾಮಾಗಿದ್ದಾರೆ. ಹೋಗಿ ಮಗಳನ್ನು ನೋಡುವುದಾದರೆ ವ್ಯವಸ್ಥೆ ಮಾಡುತ್ತೇವೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅರುಣ್ ಭಾವುಕರಾಗಿ ಮಗಳನ್ನು ನೋಡಲು ಹೋಗಿದ್ದಾರೆ. ತಲೆಸುತ್ತು ಬಂದು ಬಿದ್ದಿದ್ದಾಳೆ. ಆಪರೇಷನ್ ಆಗಿದೆ. ಈಗ ಹುಷಾರಾಗಿ ಇದ್ದಾಳೆ ಎಂದು ಅರುಣ್ಗೆ ಅಪ್ಡೇಟ್ ಸಿಕ್ಕಿದೆ.