ಹೊಸದಿಗಂತ ವರದಿ ಹುಬ್ಬಳ್ಳಿ:
ಆಮ್ ಆದ್ಮಿ ಪಕ್ಷ ವತಿಯಿಂದ ಜಿಲ್ಲೆಯ ಪ್ರಚಾರಕ್ಕೆ ಪಂಜಾಬ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ಅ ವರು ಏ. 18 ರಂದು ನಗರಕ್ಕೆ ಆಗಮಿಸಲಿದ್ದು, ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ವಿಕಾಸ ಸೊಪ್ಪಿನ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ಅಕ್ಷಯ ಪಾಕ್೯ ನಿಂದ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಮುಡೇಶ್ವರ ಕಾರ್ಖಾನೆ, ಪಥೆಶಾವಲಿ ಹಜರತ್ ದರ್ಗಾ, ಹಳೇ ಹುಬ್ಬಳ್ಳಿ ವೃತ್ತದಲ್ಲಿ ಮುಕ್ತಾಯ ವಾಲಿದೆ. ಸುಮಾರು 3 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಇನ್ನೂ ಏ. 19 ರಂದು ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದೇನೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಾಂಪ್ರದಾಯಿಕ ವಾದ್ಯಮೇಳದೊಂದಿ ಮಹಾನಗರ ಪಾಲಿಕೆ ಬಂದು ನಾಮಪತ್ರ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ರವಿಚಂದ್ರನ್ ನೆರೆಬೆಂಚಿ, ಎಂ.ಅರವಿಂದ, ಗೋವಾ ಉಸ್ತುವಾರಿ ಉಪೇಂದ್ರ ಗಾಂವಕರ, ಜಿಲ್ಲಾಧ್ಯಕ್ಷ ಅನಂತ ಕುಮಾರ ಬಗುಡಿ ಭಾಗವಹಿಸಲಿದ್ದಾರೆ ಎಂದರು. ಸ್ಥಳಿಯ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆ ಮಾಡಲಾಗುತ್ತಿದೆ. ಬಿಜೆಪಿ ನಾಯಕರು 30 ವರ್ಷ ಶಾಸಕರಾಗಿದ್ದವರು ಈಗ ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಸೆಂಟ್ರಲ್ ಕ್ಷೇತ್ರದ ಮತದಾರರಲ್ಲಿ ಗೊಂದಲ ಮೂಡಿದೆ. ಇದರ ಸದುಪಯೋಗ ಪಡೆದು ಆಪ್ ಚುನಾವಣೆ ಮಾಡಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹಸನ ಇನ್ಮಾದಾರ, ವಿಜಯಕುಮಾರ ಕೆ., ಈಶ್ವರ ಶೆಟ್ಟಿ, ಮುತಾಲಿಕ ದೇಸಾಯಿ ಇದ್ದರು.