ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬೆಳಗಿನ ದರುಶನ ಸಮಯ ಬದಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಕೋಟ್ಯಂತರ ಭಜ್ತರ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ದರುಶನದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಭಕ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ಧರ್ಮಸ್ಥಳ ದೇಗುಲದ ಆಡಳಿತ ಮಂಡಳಿ ತೆರೆ ಎಳೆದಿದೆ.

ವಿಷು ಜಾತ್ರೆಯ ಪ್ರಯುಕ್ತ ಧರ್ಮಸ್ಥಳ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಹೀಗಾಗಿ ಇಂದಿನಿಂದ (ಏಪ್ರಿಲ್ 17) ಏಪ್ರಿಲ್ 22ರವರೆಗೆ ಬೆಳಗ್ಗಿನ ದರುಶನ 8:30 ರಿಂದ ಪ್ರಾರಂಭವಾಗಲಿದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರುಶನ ಹಾಗೂ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ವಿಷು ಜಾತ್ರೆಯ ಪ್ರಯುಕ್ತ ಧರ್ಮಸ್ಥಳ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 17-04-2023ರ ಸೋಮವಾರದಿಂದ 22/04/2023ರ ಶನಿವಾರದವರೆಗೆ ಬೆಳಗ್ಗೆ 8:30 ಗಂಟೆಯವರೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರುಶನಕ್ಕೆ ಅವಕಾಶವಿಲ್ಲ ಎಂಬ ಪೋಸ್ಟ್ ಒಂದು ವೈರಲ್ ಆಗಿತ್ತು.

ಧರ್ಮಸ್ಥಳ ದೇಗುಲವು ಅಧಿಕೃತವಾಗಿ ದರುಶನದ ಸಮಯ ಬದಲಾವಣೆ ಕುರಿತು ಮಾಹಿತಿ ನೀಡುವ ಮುನ್ನವೇ ವೈರಲ್ ಆಗಿದ್ದ ಫೋಟೋದಿಂದ ಭಕ್ತರಲ್ಲಿ ಗೊಂದಲ ಉಂಟಾಗಿತ್ತು. ಆದರೆ ಇದೀಗ ಧರ್ಮಸ್ಥಳ ದೇಗುಲದ ಕಡೆಯಿಂದ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಭಕ್ತರಲ್ಲಿ ಗೊಂದಲ ಪರಿಹಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!