ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಲೋಕಸಭೆಯಲ್ಲಿ ಇಂದು ಶಿರೋಮಣಿ ಅಕಾಲಿ ದಳ (ಎಸ್ಎಡಿ)ದ ಸಂಸದೆ ಹರ್ಸಿಮೃತ್ ಕೌರ್ ಬಾದಲ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ನಲ್ಲಿ ಹೆಚ್ಚಿದ ಮಾದಕ ದ್ರವ್ಯ ಬಳಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿಎಂ ಮಾನ್ ವಿರುದ್ಧ ಕಿಡಿಕಾರಿದ್ದಾರೆ. ಇತ್ತ ಕೌರ್ ಬಾದಲ್ ಅವರು ಮಾನ್ಗೆ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದರೆ, ಅತ್ತ ಗೃಹ ಸಚಿವ ಅಮಿತ್ ಶಾ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಹಲವು ಸಂಸದರೆಲ್ಲ ಅವರ ಮಾತು ಕೇಳಿ ನಗಲು ಆರಂಭಿಸಿದ್ದಾರೆ.
ಕೌರ್, ‘ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೆಲವೇ ತಿಂಗಳುಗಳ ಹಿಂದೆ ಇದೇ ಸಂಸತ್ತಿನ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಿದ್ದರು. ಬೆಳಗ್ಗೆಯೇ ಅದೇನು ತಿಂದು-ಕುಡಿದು ಬರುತ್ತಿದ್ದರೋ ಗೊತ್ತಿಲ್ಲ. ಸದಾ ಅಮಲೇರಿಸಿಕೊಂಡಿರುತ್ತಿದ್ದರು. ಅವರ ಪಕ್ಕ ಕುಳಿತುಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ. ಅವರ ಪಕ್ಕ ಕುಳಿತುಕೊಂಡವರೆಲ್ಲ ‘ನಮ್ಮ ಸೀಟ್ ಬದಲಿಸಿಕೊಡಿ’ ಎಂದು ಸ್ಪೀಕರ್ ಬಳಿಯೇ ಕೇಳುತ್ತಿದ್ದರು. ಈ ಹಿಂದಿನ ಸ್ಪೀಕರ್ನ ಕೇಳಿನೋಡಿ, ಅವರ ಬಳಿಯಂತೂ ಅದೆಷ್ಟು ಮಂದಿ ಹೋಗಿ, ಮಾನ್ ಬಗ್ಗೆ ದೂರಿದ್ದಾರೆ ಲೆಕ್ಕವಿಲ್ಲ. ಒಟ್ಟಿನಲ್ಲಿ ಜಾಗ ಬದಲಿಸಿಕೊಂಡು ಹೋಗುತ್ತಿದ್ದರು’ ಎಂದು ಹೇಳಿದರು.
#WATCH | CM of our state (Punjab) used to sit in the House a few months ago. The person who used to come to the Parliament in an inebriated state is now running the state. Members who used to sit near him had complained to change their seats: SAD MP Harsimrat Kaur Badal in LS pic.twitter.com/tAyFRcpy7m
— ANI (@ANI) December 20, 2022
ಪಂಜಾಬ್ನ ರಸ್ತೆಗಳ ಪಕ್ಕ ಅನೇಕ ಕಡೆ ‘ಕುಡಿದು ವಾಹನ ಚಲಾಯಿಸಬೇಡಿ’ ಎಂಬ ಬೋರ್ಡ್ನ್ನು ಹಾಕಿಡಲಾಗಿದೆ. ಆದರೆ ಸ್ವತಃ ಭಗವಂತ್ ಮಾನ್ ಮದ್ಯಪಾನ ಮಾಡಿ ಇಡೀ ರಾಜ್ಯವನ್ನು ಡ್ರೈವ್ ಮಾಡುತ್ತಿದ್ದಾರೆ. ಇವರನ್ನು ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ, ಅವರು ಕುಡಿತ ಬಿಡುವುದಾಗಿ ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದೆಲ್ಲ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅದನ್ನು ಮಹಾನ್ ತ್ಯಾಗ ಎಂಬಂತೆ ಬಿಂಬಿಸಿದ್ದರು. ಆದ್ರೆ ಕುಡಿತ ಬಿಡುವುದು ತ್ಯಾಗವೇ’ ಎಂದು ಹರ್ಸಿಮೃತ್ ಕೌರ್ ಪ್ರಶ್ನಿಸಿದರು.
ಹೀಗೆ ಕೌರ್ ಅವರು ಭಗವಂತ್ ಮಾನ್ಗೆ ಬೈಯುತ್ತಿದ್ದರೆ, ಅಮಿತ್ ಶಾ, ಓಂಬಿರ್ಲಾ ಮತ್ತು ಉಳಿದೆಲ್ಲ ಸಂಸದರೂ ಜೋರಾಗಿ ನಗುತ್ತಿದ್ದರು.