ಸಿಧು ಮೂಸೆವಾಲಾ ಹತ್ಯೆ ಹೊಣೆಹೊತ್ತ ಕೆನಡಾ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಂಜಾಬಿ ರಾಜಕಾರಣಿ ಮತ್ತು ಸಿಧು ಮೂಸೆವಾಲಾ ಹತ್ಯಡೆಯ ಹೊಣೆಯನ್ನು ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ ಹೊತ್ತುಕೊಂಡಿದ್ದಾನೆ.
ಭಾನುವಾರ ಮಾನ್ಸಾ ಜಿಲ್ಲೆಯ ಜವಾಹಾರ್ಕೆ ಗ್ರಾಮದಲ್ಲಿ ಸಿಧು ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಪಂಜಾಬ್‌ ಸರ್ಕಾರವು ಅವರ ರಕ್ಷಣೆಗಾಗಿ ನೀಡಿಲಾಗಿದ್ದ ಗನ್‌ ಮ್ಯಾನ್‌ ಗಳನ್ನು ವಾಪಸ್‌ ಕರೆಸಿಕೊಂಡ ಬೆನ್ನಲ್ಲೇ ಈ ಹತ್ಯೆ ನಡೆದಿತ್ತು. ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಸಹಚರನಾಗಿರುವ ಗೋಲ್ಡಿ ಬ್ರಾರ್‌, ನಮ್ಮ ಗ್ಯಾಂಗ್‌ ನ ಸದಸ್ಯರು ಮೂಸೇವಾಲರನ್ನು ಹತ್ಯೆಗೈದಿದ್ದಾರೆ ಎಂಬ ಹೇಳಿಕೆ ನೀಡಿದ್ದಾನೆ.
ಮುಖ್ಯಮಂತ್ರಿ ಭಗವಂತ್ ಮಾನ್ ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!