ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಕುರಿತು ಯಾರಿಗೂ ತಿಳಿಯದ ಮಾಹಿತಿ ಹೊರಬಿದ್ದಿದೆ.
ಭಾರತದ R&AW ಮಾಜಿ ಮುಖ್ಯಸ್ಥ ಎಎಸ್ ದುಲತ್ ಈ ಕುರಿತು ತಮ್ಮ ಪುಸ್ತಕದಲ್ಲಿ ಬರೆದಿದ್ದು, ಅದೇನೆಂದರೆ ಆರ್ಟಿಕಲ್ 370 ರದ್ದು ಮಾಡಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತ ನದಿಯಂತೆ ಹರಿಯಲಿದೆ ಎಂದು ಬೆದರಿಕೆ ಹಾಕಿದ್ದ ಫಾರೂಖ್ ರಹಸ್ಯವಾಗಿ ಆರ್ಟಿಕಲ್ 370 ರದ್ದು ಮಾಡುವ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದರು. ಆದರೆ ಸಾರ್ವಜನಿಕವಾಗಿ ವಿರೋಧಿಸಿದ್ದರು ಎಂದು ಎಎಸ್ ದುಲತ್ ಹೇಳಿದ್ದಾರೆ.
ಎಸ್ ದುಲತ್ ಬರೆದಿರುವ ಚೀಫ್ ಮಿನಿಸ್ಟರ್ ಹಾಗೂ ಸ್ಪೈ ಅನ್ನೋ ಪುಸ್ತಕ ಎಪ್ರಿಲ್ 18 ರಂದು ಬಿಡುಗಡೆಯಾಗುತ್ತಿದೆ. ಈ ಪುಸ್ತಕದಲ್ಲಿ ಆರ್ಟಿಕಲ್ 370 ರದ್ದು ಸೇರಿದಂತೆ ಹಲವು ಸ್ಫೋಟಕ ಮಾಹಿತಿಗಳಿವೆ.
ಈ ಪೈಕಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯ ಡಬಲ್ ಸ್ಟಾಂಡರ್ಡ್ ಬಹಿರಂಗಪಡಿಸಿದ್ದು, ಫಾರೂಖ್ ಅಬ್ದುಲ್ಲಾ ಸಾರ್ವಜನಿಕವಾಗಿ ಆರ್ಟಿಕಲ್ 370 ರದ್ದು ಕುರಿತು ಹೇಳಿಕೆ ನೀಡಿದ್ದರು. ಕೇಂದ್ರದ ವಿರುದ್ಧ ಹರಿಹಾಯ್ದ ಅಬ್ದುಲ್ಲಾ, ಸತತವಾಗಿ ಗಂಭೀರ ಆರೋಪ, ಟೀಕೆಗಳನ್ನು ಮಾಡಿದ್ದರು. ಆದರೆ ಖಾಸಗಿಯಾಗಿ ಕೇಂದ್ರ ಸರ್ಕಾರದ ಈ ನಡೆಯನ್ನು ಬೆಂಬಲಿಸಿದ್ದರು ಎಂದು ಪುಸ್ತಕದಲ್ಲಿ ಹೇಳಿದ್ದಾರೆ.
ಆರ್ಟಿಕಲ್ 370 ರದ್ದು ಕುರಿತು ಫಾರೂಖ್ ಅಬ್ದುಲ್ಲಾ ತೀರಾ ಕೆಳಮಟ್ಟದ ರಾಜಕೀಯ ನಡೆಸಿದ್ದರು . ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡುವ ಕೆಲವೇ ದಿನ ಮೊದಲು ಫಾರೂಕ್ ಅಬ್ದುಲ್ಲಾ ಹಾಗೂ ಪುತ್ರ ಒಮರ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು.ದೆಹಲಿಯಲ್ಲಿ ಭೇಟಿಯಾಗಿ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ್ದರು.
ಆರ್ಟಿಕಲ್ 370 ಜಾರಿ ಮಾಡಿದ ಬೆನ್ನಲ್ಲೇ ಫಾರೂಕ್ ಅಬ್ದುಲ್ಲಾ ಅವರನ್ನು 7 ತಿಂಗಳ ಕಾಲ ಗೃಹ ಬಂಧನದಲ್ಲಿ ಇಡಲಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ವಾಸ್ತವಿಕ ಪರಿಸ್ಥಿತಿ, ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು ಎಂದು ಹೇಳಿದ್ದಾರೆ.
ಇದೀಗ ಈ ವಿಚಾರಗಳು ರಾಜಕೀಯದಲ್ಲಿ ಬಿರುಗಾಳಿಯಿಂದ ಹಬ್ಬಿದೆ. ಈ ಕುರಿತು ಫಾರೂಖ್ ಅಬ್ದುಲ್ಲಾ ಆಗಲಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.