ದಿಗಂತ ವರದಿ ಹಾಸನ :
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ಎಂಟು ದಿನ ಮಾತ್ರ ಬಾಕಿ ಇದ್ದು ಹಾಸನ ಲೋಕಸಭಾ ಕ್ಷೇತ್ರ ಹೈವೋಲ್ಟೆಜ್ ಕ್ಷೇತ್ರವಾಗಿದೆ
ಈಗಾಗಲೇ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಬಿಜೆಪಿ ನಾಯಕರ ದಂಡು ಆಗಮಿಸಿ ಮತಪ್ರಾಚರ ಮಾಡಿದ್ದು, ಇಂದು ಹಾಸನ ಜಿಲ್ಲೆಗೆ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ರೇವಣ್ಣ ಪರ ಮತಯಾಚಿಸಲಿದ್ದಾರೆ.
ಇಂದು(ಏ.18) ಸಂಜೆ ಐದು ಗಂಟೆಯಿಂದ ಹಾಸನ ನಗರದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ರೋಡ್ ಶೋ ನಡೆಸಲಿದ್ದು, ಹಾಸನ ನಗರದ ಮಹಾವೀರ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಜೆಡಿಎಸ್ನ ಮಾಜಿ ಶಾಸಕರುಗಳಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್ ಭಾಗಿಯಾಗಲಿದ್ದಾರೆ. ಇದುವರೆಗೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ರೇವಣ್ಣ ಪರ ಬಹಿರಂಗವಾಗಿ ಮತಯಾಚಿಸದ ಪ್ರೀತಂಗೌಡ
ಇಂದು ರೋಡ್ ಶೋನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಶಾಸಕರುಗಳಾದ ಎಚ್.ಪಿ.ಸ್ವರೂಪ್ಪ್ರಕಾಶ್, ಎಚ್.ಡಿ.ರೇವಣ್ಣ ಗೈರು ಸಾಧ್ಯತೆ ಇದೆ.