ದುರಂತ ಘಟನೆ: ಗಂಗಾನದಿಯಲ್ಲಿ ಕೊಚ್ಚಿ ಹೋದ ಯೋಧ ಮತ್ತು ಮೂರು ಮಕ್ಕಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೂರು ಮಕ್ಕಳು ಹಾಗೂ ಓರ್ವ ರಾಪಿಡ್ ಆಕ್ಷನ್ ಫೋರ್ಸ್‌ನ ಸಿಬ್ಬಂದಿ ಗಂಗಾನದಿಯಲ್ಲಿ ಕೊಚ್ಚಿ ಹೋದ ಘಟನೆ ಉತ್ತರ ಪ್ರದೇಶ ಪ್ರಯಾಗರಾಜ್‌ನಲ್ಲಿ ನಡೆಸಿದೆ.

ಸ್ನಾನ ಮಾಡುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫಫಮೌ ಘಾಟ್‌ನಲ್ಲಿ ಈ ದುರಂತ ಸಂಭವಿಸಿದೆ.

ಘಟನೆಯ ಬಗ್ಗೆ ತಿಳಿದ ಕೂಡಲೇ ರಾಜ್ಯ ವಿಪತ್ತು ನಿರ್ವಹಣಾ ದಳ ಸ್ಥಳಕ್ಕೆ ಧಾವಿಸಿದ್ದು, ಸುದೀರ್ಘ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.

ಮೃತ ರಾಪಿಡ್‌ ಆಕ್ಷನ್‌ ಫೋರ್ಸ್‌ ಸಿಬ್ಬಂದಿಯನ್ನು ಉಮೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಅವರು ತಮ್ಮಿಬ್ಬರು ಮಕ್ಕಳು ಹಾಗೂ ನೆರೆಮನೆಯ ಮಗುವಿನೊಂದಿಗೆ ಸ್ನಾನ ಮಾಡುತ್ತಿದ್ದರು. ಈ ಸಮಯದಲ್ಲಿ ಆಳವಾದ ಗುಂಡಿ ಇದ್ದಲ್ಲಿ ಮಕ್ಕಳು ಬಿದ್ದಿದ್ದು, ಅವರ ರಕ್ಷಣೆ ಮಾಡಲು ಉಮೇಶ್‌ ಧುಮುಕಿದ್ದಾರೆ. ಆದರೆ ದುರದೃಷ್ಟವೆಂದರೆ ನೀರಿನ ರಭಸಕ್ಕೆ ಎಲ್ಲರೂ ಕೊಚ್ಚಿ ಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!