ರಫೇಲ್ ಫೈಟರ್ ನಿಂಬೆ ಹಣ್ಣು, ಮೆಣಸಿನಕಾಯಿ ಕಟ್ಟಿದ ಆಟಿಕೆ: ನಾಲಿಗೆಹರಿಬಿಟ್ಟ ಕಾಂಗ್ರೆಸ್ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಫೇಲ್ ಫೈಟರ್ ಆಟಿಕೆ ಎಂದು ಕಾಂಗ್ರೆಸ್​ ನಾಯಕ ಅಜಯ್​ ರಾಯ್​ ಕರೆದಿದ್ದಾರೆ .

ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಮೋದಿ ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಕಟ್ಟಿದ ಆಟಿಕೆ ರಫೇಲ್ ಫೈಟರ್ ಜೆಟ್ ಬಳಸಿ ಸೋಮವಾರ ಕೇಂದ್ರವನ್ನು ಅಣಕಿಸಿದ್ದಾರೆ.

ಇದು ಕೇಂದ್ರ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಸಾರ್ವಜನಿಕ ಹತಾಶೆಯನ್ನು ಸಂಕೇತಿಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ 2019 ರ ‘ಶಾಸ್ತ್ರ ಪೂಜೆ’ಯನ್ನು ಉಲ್ಲೇಖಿಸಿ ರೈವ್ ಈ ರೀತಿ ಅಣಕಿಸಿದ್ದಾರೆ. ರಾಜನಾಥ್ ಸಿಂಗ್ ಅವರು ರಫೇಲ್ ಜೆಟ್‌ನ ಚಕ್ರಗಳ ಕೆಳಗೆ ನಿಂಬೆಹಣ್ಣುಗಳನ್ನು ಇಟ್ಟು ತೆಂಗಿನಕಾಯಿಯನ್ನು ಒಡೆದು ಭಾರತಕ್ಕೆ ಹಾರಿಸಿದ್ದರು.

ಪಹಲ್ಗಾಮ್‌ನಲ್ಲಿ ನಮ್ಮ ಯುವಕರು ಕೊಲ್ಲಲ್ಪಟ್ಟರು, ಆದರೆ ರಫೇಲ್ ಜೆಟ್‌ಗಳು ಇನ್ನೂ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಗಳೊಂದಿಗೆ ಹ್ಯಾಂಗರ್‌ಗಳಲ್ಲಿವೆ. ಸಂತ್ರಸ್ತರ ಕುಟುಂಬಗಳು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿವೆ. ಸರ್ಕಾರದಿಂದ ಈ ಮೌನ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಭಯೋತ್ಪಾದನೆ ಅಥವಾ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಯಾವುದೇ ಕ್ರಮವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಬೆಂಬಲಿಸುತ್ತದೆಯಾದರೂ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ರೈ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!