ಭಾಷಣ ಮಾಡುತ್ತಾ ಮಾಡುತ್ತಾ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಪ್ರದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಭಾಷಣ ಮಾಡುತ್ತಿದ್ದಾಗಲೇ ತಲೆ ಮೇಲೆ ನೀರು ಸುರಿದುಕೊಂಡರು.

ಸದ್ಯ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾಷಣದ ವೇಳೆ ರಾಗಾ ಅವರು ನೀರು ಕುಡಿಯಲು ಕೈಯಲ್ಲಿ ಮೊದಲು ಬಾಟ್ಲಿ ಹಿಡಿದುಕೊಂಡರು. ಆಗ ವೇದಿಕೆ ಮುಂಭಾಗ ನೆರೆದಿದ್ದ ಜನ ಜೋರಾಗಿ ಕೂಗಲಾರಂಭಿಸಿದರು. ಆ ವೇಳೆ ಇವತ್ತು ಬಿಸಿಲು ಜಾಸ್ತಿ ಎಂದವರೇ ರಾಗಾ ನೇರವಾಗಿ ತಲೆಗೆ ತಣ್ಣೀರು ಸುರಿದುಕೊಂಡರು. ಕಾಂಗ್ರೆಸ್‌ ನಾಯಕನ ನಡೆಗೆ ವೇದಿಕೆಯಲ್ಲಿದ್ದ ಹಲವರು ಅಚ್ಚರಿ ವ್ಯಕ್ತಪಡಿಸಿದರು.

https://x.com/INCIndia/status/1795394803087417800?ref_src=twsrc%5Etfw%7Ctwcamp%5Etweetembed%7Ctwterm%5E1795394803087417800%7Ctwgr%5E6e677b5a16d6716e48d71574dbf7d0d7800ffc23%7Ctwcon%5Es1_&ref_url=https%3A%2F%2Fpublictv.in%2Frahul-gandhi-pours-water-on-his-head-in-during-speech-in-uttarpradesh%2F

ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು. ಈ ಯುದ್ಧವು ಸಿದ್ಧಾಂತದ ಯುದ್ಧವಾಗಿದೆ. ಒಂದೆಡೆ ಭಾರತ ಅಘಾಡಿ, ಇನ್ನೊಂದೆಡೆ ಸಂವಿಧಾನ ಬದಲಿಸಬೇಕು ಎನ್ನುವ ಜನರಿದ್ದಾರೆ. ಬಿಜೆಪಿ ನಾಯಕರು ಸಂವಿಧಾನ ಬದಲಿಸುತ್ತೇವೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ ಭಾರತ ಅಘಾಡಿ ಇದನ್ನು ಎಂದಿಗೂ ಅನುಮತಿಸುವುದಿಲ್ಲ. ಬಾಬಾಸಾಹೇಬರು ರಚಿಸಿದ ಸಂವಿಧಾನದಿಂದ ದೇಶದ ಹಿಂದುಳಿದ ವರ್ಗದವರಿಗೆ ಹಕ್ಕು ಸಿಕ್ಕಿದೆ. ಈ ಸಂವಿಧಾನ ಅವರಿಗೆ ಮೀಸಲಾತಿ ನೀಡಿದೆ. ಆದರೆ ಬಿಜೆಪಿ ದಲಿತ ಸಂತ್ರಸ್ತರಿಗೆ ಮೀಸಲಾತಿಯನ್ನು ರದ್ದುಪಡಿಸಲು ಬಯಸುತ್ತಿದೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!