ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಳೆದ ಹಲವು ಪಂದ್ಯಗಳಿಂದ ಕಳಪೆ ಫಾರ್ಮ್ ನಿಂದ ರಾಹುಲ್ ಓದಾಡುತ್ತಿದ್ದು,ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಹೀಗಾಗಿ ಅನೇಕರು ರಾಹುಲ್ ಅನ್ನು ತಂಡದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಆದಾಗ್ಯೂ ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಬೆಂಬಲಕ್ಕೆ ನಿಂತಿದ್ದಾರೆ. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತನ್ನು ಉಚ್ಛರಿಸಿದ್ದಾರೆ.
ಕೆ. ಎಲ್ ರಾಹುಲ್ ಉತ್ತಮ ಬ್ಯಾಟರ್ ಆಗಿರುವ ಕಾರಣ ಅವರಿಗೆ ಹೆಚ್ಚಿನ ಬೆಂಬಲದ ಅಗತ್ಯ ಇರುವುದಿಲ್ಲ. ಅವರ ತಾಂತ್ರಿಕ ನೈಪುಣ್ಯ ಹೆಚ್ಚಿಸುವ ಅಗತ್ಯವೂ ಇಲ್ಲ. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಪ್ರದರ್ಶನ ಕಂಡುಕೊಳ್ಳುವುದಕ್ಕೆ ನೆರವಾಗಬಹುದು ಎಂಬುದಾಗಿ ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ.
ಭಾರತ ತಂಡ ಗೆಲುವಿಗೆ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಅವರ ಬ್ಯಾಟಿಂಗ್ ನೆರವಾಯಿತು ಎಂಬುದಾಗಿಯೂ ಅವರೂ ಹೇಳಿದರು. ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡದ ಕನಿಷ್ಠ ಮೊತ್ತಕ್ಕೆ ಆಲ್ಔಟ್ ಆಗುವ ಅವಕಾಶಗಳಿದ್ದವು. ಆದರೆ, ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಜೋಡಿ ಶತಕದ ಜತೆಯಾಟವಾಡಿದರು. ಅವರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡದಲ್ಲಿ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು ಎಂಬುದಾಗಿ ದ್ರಾವಿಡ್ ಹೇಳಿದರು. ಇದೇ ವೇಳೆ ಅವರು ಟೀಮ್ ಇಂಡಿಯಾದ ಬೌಲರ್ಗಳ ಶ್ರಮವನ್ನೂ ಕೊಂಡಾಡಿದರು.