ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಮೂಲದ ಭಾರತ ಕೊಟ್ಟ ತಿರುಗೇಟಿನಿಂದ ಚೇತರಿಕೊಳ್ಳುವ ಮುನ್ನವೇ ಪಾಕ್ಗೆ ಭಾರತ ಮತ್ತೊಂದು ಹೊಡೆತ ಕೊಟ್ಟಿದೆ. ಲಾಹೋರ್, ಕರಾಚಿ, ರಾವಲ್ಪಿಂಡಿ, ಗೋಕ್ಟಿ, ಸಿಯಾ ಕೋಟ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಇಂದು ಭಾರತ ಎರಡನೇ ಹಂತದ ದಾಳಿನಡೆಸಿವೆ.
ಈ ದಾಳಿ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ,ಮತ್ತೆ ತಾಳ್ಮೆ ಪರೀಕ್ಷಿಸಿದರೆ ಪರಿಣಾಮ ನೆಟ್ಟಗಿರಲ್ಲ. ಆಪರೇಷನ್ ಸಿಂದೂರ ಮುಂದುವರಿದಿದೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನಿನ್ನೆ ನಮ್ಮ ಸೇನೆ ತೆಗೆದುಕೊಂಡ ಕ್ರಮ ಮತ್ತು ಅವರು ತೋರಿಸಿದ ಧೈರ್ಯ ಮತ್ತು ಶೌರ್ಯಕ್ಕಾಗಿ ನಾನು ಸಶಸ್ತ್ರ ಪಡೆಗಳನ್ನು ಅಭಿನಂದಿಸುತ್ತೇನೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ತಟಸ್ಥಗೊಳಿಸಲಾಗಿದೆ, ಇದು ನಮಗೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಭಾರತದ ಈ ಸಂಯಮದ ಲಾಭ ಪಡೆಯಲು ಯಾರಾದರೂ ಪ್ರಯತ್ನಿಸಿದರೆ, ಅವರು ನಿನ್ನೆ ನಡೆದಂತಹ ಕಠಿಣ ಕ್ರಮ ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಭಾರತದ ರಕ್ಷಣೆ ವಿಚಾರಕ್ಕೆ ಬಂದಾಗ ಯಾವ ಮಟ್ಟ ಕ್ರಮಕ್ಕೂ ಭಾರತ ತಯಾರಾಗಿದೆ. ಆಪರೇಷನ್ ಸಿಂದೂರ್ ಬೆನ್ನಲ್ಲೇ ಇಂದು ಮತ್ತೆ ಭಾರತೀಯ ಸೇನೆ ಪಾಕ್ ಸೇನಾ ಪ್ರಧಾನ ಕಚೇರಿ, ಕ್ರಿಕೆಟ್ ಸ್ಟೇಡಿಯಂ, ವಾಯುನೆಲೆ, ಸೇನಾ ನೆಲೆಗಳ ಮೇಲೆ ಡ್ರೋನ್ ಡೆಡ್ಲಿ ಅಟ್ಯಾಕ್ ನಡೆಸಿವೆ.