ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ನಾಡು ನುಡಿಯ ಸ್ಮರಣೆಯ ಕರ್ನಾಟಕ ರಾಜ್ಯೋತ್ಸವದ ಶುಭದಿನವಾದ ಇಂದು ನಾಡಿನೆಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಮೈಸೂರು ರಾಜ್ಯವು 1956ರ ನವೆಂಬರ್ 1 ರಂದು ಕರ್ನಾಟಕವಾಗಿ ಬದಲಾದ ಶುಭದಿನದ ಸ್ಮರಣೆಗಾಗಿ ಅಂದಿನಿಂದಲೂ ನಂವೆಂಬರ್ 1 ನ್ನು ಕರ್ನಾಟಕ ರಾಜ್ಯೋತ್ಸವ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಇಂದು ನಾಡಿನ ಶ್ರೇಷ್ಠ ಪರಂಪರೆಯ ಸ್ಮರಣೆ ಮಾಡುತ್ತ ಅನೇಕ ರೀತಿಯಲ್ಲಿ ರಾಜ್ಯೋತ್ಸವದ ಆಚರಣೆ ನಡೆಸಲಾಗುತ್ತಿದೆ. ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಶ್ರೇಷ್ಠಭಾಷೆ ಕನ್ನಡದ ಹಿರಿಮೆಯನ್ನು ಜಗತ್ತಿಗೇ ಸಾರುವ ಕೆಲಸವಾಗುತ್ತಿದೆ. ದೇಶ ವಿದೇಶಗಳಲ್ಲಿರುವ ಕನ್ನಡಿಗರಷ್ಟೇ ಅಲ್ಲದೇ ಕನ್ನಡದ ಮೇಲೆ ಪ್ರೀತಿ ಅಭಿಮಾನ ಹೊಂದಿರುವ ಇತರ ಭಾಷಿಗರೂ ಸಹ ರಾಜ್ಯೋತ್ಸವದ ಶುಭಾಶಯ ಕೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟರ್ ನಲ್ಲಿಯೂ ಕನ್ನಡದ ಕಂಪು ಪಸರಿಸುತ್ತಿದೆ. #ರಾಜ್ಯೋತ್ಸವ-ರಾಷ್ಟ್ರೋತ್ಸವ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಈ ಟ್ರೆಂಡ್ ನಲ್ಲಿ ಕೆಲ ಆಯ್ದ ಟ್ವೀಟ್ ಗಳು ನಿಮಗಾಗಿ..
ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯವಿಲೀನವಿಶದವಿಷಯವಿಶೇಷಂ॥#ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/vGpcrdAcSF
— Nivane Kalanath Bhat (@KalanathNivane) November 1, 2022
ಕನ್ನಡ ರಾಜ್ಯೋತ್ಸವದ ಪ್ರಯುಕ್ತ.
ಇಸ್ರೇಲ್ ಕಚೇರಿಯಲ್ಲಿ ನಮ್ಮ ಸಹದ್ಯೋಗಿಗಳೊಂದಿಗೆ ಆಚರಿಸಲು ನಮಗೆ ಇದಕ್ಕಿಂತ ಉತ್ತಮ ಸಂದರ್ಭ ಸಿಗುವುದಿಲ್ಲ. ಕರ್ನಾಟಕ ಮತ್ತು ಕನ್ನಡ ಪ್ರೇಮಿಗಳಿಗೆ ಯಶಸ್ಸು ಮತ್ತು ಸಮೃದ್ಧಿಯನ್ನು ಬಯಸುತ್ತೇವೆ. #ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/7xSRFaN3x0— Israel in Bengaluru (@IsraelBangalore) November 1, 2022
ಡಿವಿಜಿ ಅವರ ಮಾತೃಭಾಷೆ ತೆಲುಗು.
ನಾ ಕಸ್ತೂರಿ ಅವರ ಮಾತೃಭಾಷೆ ಮಲಯಾಳಂ.
ಮಾಸ್ತಿ ಅವರ ಮಾತೃಭಾಷೆ ತಮಿಳು.
ಬೇಂದ್ರೆ ಅವರ ಮಾತೃಭಾಷೆ ಮಾರಾಠಿ.
ಆದರೆ ಬರೆದದ್ದು ಕನ್ನಡದಲ್ಲಿ. ಶ್ರೀಮಂತಗೊಳಿಸಿದ್ದು ಕನ್ನಡ ಸಾಹಿತ್ಯವನ್ನು.ಹೇಗೆ ಹುಡುಕಿದರೆ ಹಲವು ಉದಾಹರಣೆಗಳು ಸಿಗುತ್ತವೆ. #ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/DzGUx9OseZ
— Praveen Patavardhan ಪ್ರವೀಣ್ ಪಟವರ್ಧನ್ (@prakopa) November 1, 2022
#ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/OknbYywBOM
— Rajesh Padmar (@rajeshpadmar) November 1, 2022
'ಕರ್ನಾಟ ಭಾರತ ಕಥಾ ಮಂಜರಿ'
ಮಹಾಭಾರತವನ್ನು ತನ್ನದೇ ಆದ ಶೈಲಿ ಮತ್ತು ಅಗತ್ಯ ಮಾರ್ಪಾಟಿನೊಂದಿಗೆ ಕನ್ನಡದಲ್ಲಿ ಭಾಮಿನಿಷಟ್ಪದಿ ಛಂದಸ್ಸಿನಲ್ಲಿ ಗದುಗಿನ ನಾರಣಪ್ಪನು ಬರೆದ ಕನ್ನಡ ನಾಡಿನ ಅತ್ಯಂತ ಜನಪ್ರಿಯ ಕಾವ್ಯ.
ಇವನು ತನ್ನನ್ನು ಕುಮಾರವ್ಯಾಸ ಎಂದು ಕರೆದುಕೊಂಡಿದ್ದಾನೆ .#ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/1A5bAKzrIA
— Harisha Mysuru (@Harisha_Mysuru) November 1, 2022
ಕೆಳದಿ ಚೆನ್ನಮ್ಮ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ. ಶತ್ರು ಪಾಳಯಕ್ಕೆ ಬೆಂಕಿಚೆಂಡಿನಂತಿದ್ದ ವೀರವನಿತೆ. ವೀರಾಧಿವೀರರನ್ನೇ ಯುದ್ಧರಂಗದಲ್ಲಿ ಮಂಡಿ ಊರುವಂತೆ ಮಾಡಿದ ರಣಚತುರೆ. ತನ್ನ ಸ್ಥಿರ ಸಂಕಲ್ಪ, ದೂರದೃಷ್ಟಿ, ಕಲಿತನಗಳಿಂದ ಇಕ್ಕೇರಿ ಸಂಸ್ಥಾನವನ್ನು ವಿಪತ್ತಿನಿಂದ ಪಾರು ಮಾಡಿದ ದಿಟ್ಟ ಮಹಿಳೆ.#ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/803TBf7X8o
— Jyothi (@ijyothivs) November 1, 2022
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ. 💛❤ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! #KarnatakaRajyotsava #ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/lgt6rbf5wL
— Shruthi Thumbri 🇮🇳 (@Shruthi_Thumbri) November 1, 2022
ಭಾವ ರಾಗ ತಾಳಗಳ ಸಮವಾದ ಸಮ್ಮಿಶ್ರಣದೊಂದಿಗೆ ಪೌರಾಣಿಕ ಕಥೆಗಳನ್ನು ಅದ್ಭುತವಾಗಿ ನಿರೂಪಿಸುವ ಕಲೆ ಯಕ್ಷಗಾನ.#ರಾಜ್ಯೋತ್ಸವ_ರಾಷ್ಟ್ರೋತ್ಸವ pic.twitter.com/9olkBZ5SfH
— Jyothi (@ijyothivs) November 1, 2022