ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೇಶಾದ್ಯಂತ ಜನ ಸಂಭ್ರಮ ಸಡಗರದಿಂದ ಅಯೋಧ್ಯೆ ಅಧಿಪತಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಹಬ್ಬ ರಾಮ ನವಮಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.
ಹಾಗೆಯೇ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್, ರಾಮನವಮಿಯ ಮುನ್ನಾ ದಿನ ಒಡಿಶಾದ ಪುರಿ ಕಡಲ ತೀರದಲ್ಲಿ ಅಯೋಧ್ಯೆಯ ರಾಮ ದೇಗುಲದ ಮರಳು ಶಿಲ್ಪವನ್ನು ಬಿಡಿಸಿದ್ದು ಇದು ರಾಮಪ್ರಿಯರ ಮನವನ್ನು ಸೆಳೆಯುತ್ತಿದೆ.