ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನಲ್ಲಿ ಶ್ರೀರಾಮನ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಶ್ರೀರಾಮ ಶೋಭಾಯಾತ್ರೆ ನಿಮಿತ್ತ ನಗರದ ಹಲವೆಡೆ ಸಂಚಾರ ನಿರ್ಬಂಧ ಹೇರಲಾಗಿದೆ. ಗುರುವಾರ ಮಧ್ಯಾಹ್ನ 1 ಗಂಟೆಗೆ ಶೋಭಾಯಾತ್ರೆ ಆರಂಭವಾಗಲಿದೆ. ಮೆರವಣಿಗೆಯು ಸೀತಾರಾಮ್ ಬಾಗ್ ದೇವಸ್ಥಾನದಿಂದ ಸುಲ್ತಾನ್ ಬಜಾರ್ ಹನುಮಾನ್ ಜಿಮ್ನಾಷಿಯಂ ವರೆಗೆ ಸಾಗಲಿದೆ. ಸಿಸಿಟಿವಿ ಕ್ಯಾಮರಾ ಮತ್ತು ಪೊಲೀಸ್ ಕಣ್ಗಾವಲಿನಲ್ಲಿ ಶೋಭಾಯಾತ್ರೆ 6 ಕಿಲೋಮೀಟರ್ ವರೆಗೆ ನಡೆಯಲಿದೆ.
ಶೋಭಾಯಾತ್ರೆಯು ದುಲ್ ಪೇಟ್ ಸೀತಾರಾಂಬಾಗ್ ದೇವಸ್ಥಾನದಿಂದ ಪ್ರಾರಂಭವಾಗಿ ಬೋಯಗುಡ ಕಮಾನ್, ಮಂಗಲ್ ಹತ್ ಜಾಲಿ ಹನುಮಾನ್, ದುಲ್ ಪೇಟ, ಪುರಾನಾಪೂಲ್, ಜುಮೆರಾತ್ ಬಜಾರ್, ಚೂಡಿಬಜಾರ್, ಬೇಗಂಬಜಾರ್ ಚತ್ರಿ, ಬರ್ತನ್ ಬಜಾರ್, ಸಾಯಿಬರ್ ಬಜಾರ್ ಮಸೀದಿ, ಶೇರ್ ಕೋಟಾಲ್, ಗೌಳಿಗೌಡ ಕಮಾನ್, ಶಂಕರಗೌಡ ಕಮಾನ್, ಶಂಕರಗೌಡ ಕಮಾನ್, ಆಂಧ್ರ ಬ್ಯಾಂಕ್ ಮೂಲಕ ಸುಲ್ತಾನ್ ಬಜಾರ್ನಲ್ಲಿರುವ ಹನುಮಾನ್ ಜಿಮ್ನಾಷಿಯಂ ತಲುಪಲಿದೆ. ಶೋಭಾಯಾತ್ರೆ ಮಾರ್ಗದ ನಕ್ಷೆಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದ್ದು, ಹಲವೆಡೆ ಸಂಚಾರ ಮಾರ್ಗ ಬದಲಿಸಲಾಗಿದೆ.
ಮಾರ್ಚ್ 30ರ ಗುರುವಾರ ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ವಿವಿಧ ಪ್ರದೇಶಗಳಲ್ಲಿ ಹಾಗೂ ವಿವಿಧ ಸಮಯಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದ್ದು, ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.