ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ (95) ಮಂಗಳವಾರ ಸಂಜೆ ವೃದ್ಧಾಪ್ಯದಿಂದ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಮಂಗಳವಾರ ರಾತ್ರಿ 8:14 ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎನ್ನಲಾಗಿದೆ. ಅವರು 2017 ರಲ್ಲಿ ಮಿಷನ್ನ 16 ನೇ ಅಧ್ಯಕ್ಷರಾದವರು.
ಸ್ವಾಮಿ ಸ್ಮರಣಾನಂದರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸ್ಮರಣಾನಂದ ಅವರು ಮೂತ್ರನಾಳದ ಸೋಂಕಿನಿಂದ ಜನವರಿ 29 ರಂದು ರಾಮಕೃಷ್ಣ ಸೇವಾ ಪ್ರತಿಷ್ಠಾ ಮಿಷನ್ಗೆ ದಾಖಲಾಗಿದ್ದರು. ನಂತರ ಅವರು ಉಸಿರಾಟದ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾ. 3ರಿಂದ ವೆಂಟಿಲೇಟರ್ನಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ.