ನನ್ನ ಮೈಯಲ್ಲಿ ಹರಿಯುತ್ತಿರುವುದು ರಾಣಿ ಕಿತ್ತೂರು ಚೆನ್ನಮ್ಮ, ಪಂಚಮಸಾಲಿ ರಕ್ತ: ಲಕ್ಷ್ಮೀ ಹೆಬ್ಬಾಳ್ಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚಮಸಾಲಿ, ರಾಣಿ ಕಿತ್ತೂರು ಚೆನ್ನಮ್ಮನ ರಕ್ತ ನನ್ನ ದೇಹದಲ್ಲಿ, ನನ್ನ ಮಗನ ದೇಹದಲ್ಲಿ ಹರಿಯುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತುಂಬಾ ಸಮರ್ಪಿತ ಮತ್ತು ಹೆಮ್ಮೆಪಡುತ್ತೇನೆ. ನಾನು ಪಂಚಮಸಾಲಿ ಎಂದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಂಚಮಸಾಲಿ ಅಲ್ಲ. ಬಣಜಿಗ ಎಂಬ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹುಶಃ ನಿರಾಣಿ ಅಣ್ಣನವರು ಎಲ್ಲೋ ಒಂದು ಕಡೆ ನಿರಾಸೆ ಆಗಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದು ತಿರುಗೇಟು ನೀಡಿದರು.

ನಾವು ಬಸವಣ್ಣನವರ ತತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ಅಂಬೇಡ್ಕರ್ ಅವರ ನಾಯಕತ್ವದ ಸಂವಿಧಾನವನ್ನು ಒಪ್ಪಿಕೊಳ್ಳುತ್ತೇವೆ. ಪಂಚಮಸಾಲಿ ಮೀಸಲು ಕದನದಲ್ಲಿ ನಾನು ಮತ್ತು ನನ್ನ ಮಗ ಮುಂಚೂಣಿಯಲ್ಲಿದ್ದು , 2ಎ ಮೀಸಲಾತಿಗಾಗಿ ನನ್ನ ಇಡೀ ಕುಟುಂಬ ಹೋರಾಟ ಮಾಡಿದೆ ಎಂದರು.

ಈ ಚುನಾವಣೆ ಬೆಳಗಾವಿ ಜಿಲ್ಲೆಯ ಜನರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಇದು ನಮ್ಮ ಉಳಿವಿನ ವಿರುದ್ಧದ ನಮ್ಮ ಹೋರಾಟದ ವಿಷಯವಾಗಿದೆ. ಬೆಳಗಾವಿ ಜನತೆ ಸ್ವಾಭಿಮಾನಿಗಳು, ಮೃಣಾಲ್ ಹೆಬ್ಬಾಳ್ಕರ್‌ಗೆ ಆಶೀರ್ವಾದ ಮಾಡುವುದಾಗಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!