ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಎನ್ಐಎ ಬುಧವಾರ ಬೆಳ್ಳಬೆಳಗ್ಗೆಯೇ ದೇಶದ್ರೋಹಿಗಳಲ್ಲಿ ನಡುಕ ಹುಟ್ಟಿಸಿದ್ದರೆ ಇನ್ನೊಂದೆಡೆ ಲೋಕಾಯುಕ್ತ ಭ್ರಷ್ಟಾಚಾರಿಗಳ ಬೆವರಿಳಿಸುತ್ತಿದೆ.
ಬೆಂಗಳೂರು ಸಹಿತ ರಾಜ್ಯದ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಮಿಂಚಿನ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವ ಭ್ರಷ್ಟರನ್ನು ಬಲೆಗೆ ಕೆಡಹುವ ಸಿದ್ಧತೆಯಲ್ಲಿದ್ದಾರೆ.
ರಾಜ್ಯದ ಒಟ್ಟು 58 ಕಡೆಗಳಲ್ಲಿ 13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿ 25 ಪಿಐ ಸೇರಿದಂತೆ 130 ಅಧಿಕಾರಿಗಳ ತಂಡ ದಾಳಿ ಆರಂಭಿಸಿದೆ.