ದಿಗಂತ ವರದಿ ವಿಜಯಪುರ:
ನಗರದಲ್ಲಿ ರಾಷ್ಟ್ರಸೇವಿಕಾ ಸಮಿತಿ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು.
ನಗರದ ಶಿವಾಜಿ ವೃತ್ತದಿಂದ ಪ್ರಾರಂಭಗೊಂಡ ಪಥ ಸಂಚಲನ, ಗಾಂಧಿಚೌಕ್, ಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ ಎಸ್.ಎಸ್. ಹೈಸ್ಕೂಲ್ ಆವರಣಕ್ಕೆ ತಲುಪಿ, ಸಂಪನ್ನಗೊಂಡಿತು.
ಪಥಸಂಚಲನದಲ್ಲಿ ರಾಷ್ಟ್ರಸೇವಿಕಾ ಸಮಿತಿ ಸೇವಕಿಯರು ಘೋಷವಾದ್ಯ ನುಡಿಸುತ್ತ ಸಾಗಿ, ಅಲಂಕೃತ ಜೀಪ್ನಲ್ಲಿ ಅಷ್ಟಭುಜ ದೇವಿ ಭಾವಚಿತ್ರದ ಮೆರಣಿಗೆ ನಡೆಸಿದರು. ಪಥಸಂಚಲನ ವೇಳೆ ರಾಷ್ಟ್ರಸೇವಿಕಾ ಸಮಿತಿಯ ಸೇವಕಿಯರ ಮೇಲೆ ಸಾರ್ವಜನಿಕರು ಪುಷ್ಪವೃಷ್ಟಿ ಮಾಡಿ, ಭಾರತ ಮಾತಾಕೀ ಜೈ ಎನ್ನುತ್ತ ದೇಶಾಭಿಮಾನ ಮೆರೆಯುತ್ತಿದ್ದರು.