ತಿರುಮಲದಲ್ಲಿ ವೈಭವದ ರಥಸಪ್ತಮಿ:7ವಾಹನದಲ್ಲಿ ಮಲಯಪ್ಪಸ್ವಾಮಿ ವಿರಾಜಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲದಲ್ಲಿ ರಥಸಪ್ತಮಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಏಳು ವಾಹನಗಳ ಮೇಲೆ ಮಲಯಪ್ಪಸ್ವಾಮಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಸೂರ್ಯಪ್ರಭ ವಾಹನದ ಮೇಲೆ ಮಲಯಪ್ಪಸ್ವಾಮಿ ವಿಹಾರ ಮಾಡಿದರು. ಇದಾದ ನಂತರ ಪುಟ್ಟ ಚಿಕ್ಕಶೇಷ ವಾಹನದಲ್ಲಿ ಮೆರವಣಿಗೆ ನಡೆದಿದೆ.

ಬೆಳಗ್ಗೆ 11 ಗಂಟೆಗೆ ಮಲಯಪ್ಪಸ್ವಾಮಿ ಗರುಡು ವಾಹನದ ಮೇಲೆ ವಿರಾಜಮಾನರಾಗುವರು. ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಹನುಮಂತ ವಾಹನದಲ್ಲಿ, ಸಂಜೆ 4 ಗಂಟೆಯಿಂದಲೇ ಕಲ್ಪವೃಕ್ಷ ವಾಹನದಲ್ಲಿ ಭಕ್ತರ ದರ್ಶನವಾಗುತ್ತದೆ.

ಸಂಜೆ 6 ರಿಂದ 7 ರವರೆಗೆ ಸರ್ವಭೂಪಾಲ ವಾಹನ ಹಾಗೂ ರಾತ್ರಿ 8 ರಿಂದ 9 ರವರೆಗೆ ಚಂದ್ರಪ್ರಭ ವಾಹನದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಮೆ. ರಥಸಪ್ತಮಿ ನಿಮಿತ್ತ ಇಂದು ಏಳು ವಾಹನಗಳಲ್ಲಿ ದರ್ಶನ ನೀಡಲಾಗುವುದು. ತಿರುಮಲದ ಬೀದಿಗಳಲ್ಲಿ ಮಲಯಪ್ಪಸ್ವಾಮಿ ಮೆರವಣಿಗೆಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!