RCB | ಸೋಲಿನ ಮೇಲೆ ಸೋಲು.. ತಾಳ್ಮೆ ಕಳೆದುಕೊಂಡ ‘ಕಿಂಗ್’: ಅಂದುಕೊಂಡಿದ್ದೆ ಒಂದು, ಆಗ್ತಿರೋದೇ ಇನ್ನೊಂದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ರಣರಂಗದಲ್ಲಿ ಘರ್ಜಿಸ್ತಿರೋ ಕೊಹ್ಲಿ, ಸಾಲಿಡ್​ ಬ್ಯಾಟಿಂಗ್​ ನಡೆಸ್ತಿದ್ದಾರೆ. ಆಡಿದ ಆರು ಪಂದ್ಯಗಳಲ್ಲಿ ಒಂದು ಶತಕ ಸಹಿತ, ಬರೋಬ್ಬರಿ 72.20ರ ಸರಾಸರಿಯಲ್ಲಿ 361 ರನ್​ ಗಳಿಸಿದರು. ಆದರೆ ಕೊಹ್ಲಿ ಮುಖದಲ್ಲಿ ಖುಷಿಯೇ ಇಲ್ಲ.

ವಾಸ್ತವವಾಗಿ, ಈ IPL ಪ್ರಾರಂಭವಾಗುವ ಮೊದಲು ಕಿಂಗ್ ಕೊಹ್ಲಿ ಹೊಸ ಮನಸ್ಥಿತಿಯನ್ನು ಹೊಂದಿದ್ದರು. ಕೆಲ ದಿನಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದ ಕೊಹ್ಲಿ ಮತ್ತೆ ರಿಫ್ರೆಶ್ ಆಗಿ ಎಂಟ್ರಿ ಕೊಟ್ಟಿದ್ದರು. ಟೂರ್ನಿ ಆರಂಭಕ್ಕೂ ಮುನ್ನ ಆರ್​​ಸಿಬಿಯಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

ಕೊಹ್ಲಿ ಅಂದುಕೊಂಡಿದ್ದೇ ಒಂದು ಆದರೆ ಆನ್‌ಫೀಲ್ಡ್‌ನಲ್ಲಿ ನಡೆಯುತ್ತಿರುವುದೇ ಇನ್ನೊಂದು. ಕೊಹ್ಲಿ ತಮ್ಮ ಸಾಮರ್ಥ್ಯವನ್ನು ಮೀರಿ ಆಟವಾಡಿದ್ದಾರೆ. ಆದರೆ, ಉಳಿದ ಆಟಗಾರರು ಸೋಲಿನ ಸುಳಿಗೆ ಸಿಲುಕಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ದೊಡ್ಡ ಪೆಟ್ಟು ಬಿದ್ದಿದೆ. ಏಕಾಂಗಿಯಾಗಿ ಹೋರಾಡುತ್ತಿರುವ ಕೊಹ್ಲಿ ಹತಾಶರಾಗಿದ್ದಾರೆ.

ಸೋಲಿನ ಸುಳಿಗೆ ಸಿಲುಕಿದ್ದ ಆರ್‌ಸಿಬಿ ಹೈದರಾಬಾದ್ ವಿರುದ್ಧ ಗೆಲುವಿನ ಹಾದಿಗೆ ಮರಳುವ ನಿರೀಕ್ಷೆ ಇತ್ತು. ಆದರೆ ಅದು ಈಡೇರಲಿಲ್ಲ. ಕಳಪೆ ಬೌಲಿಂಗ್ ನೋಡಿ ಬೇಸತ್ತ ವಿರಾಟ್ ಮೈದಾನದಲ್ಲಿ ತಮ್ಮ ಹತಾಶೆಯನ್ನು ಹೊರಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!